ಮನೋರಂಜನೆ

ವಿದೇಶದಲ್ಲಿ ‘ಯಜಮಾನ’ ಹಾಡಿನ ಚಿತ್ರೀಕರಣದಲ್ಲಿದ್ದ ದರ್ಶನ್​ ಎಲ್ಲ ಬಿಟ್ಟು ಅಂಬಿ ‘ದರ್ಶನ’ಕ್ಕಾಗಿ ಬಂದ್ರು…

Pinterest LinkedIn Tumblr

ತೂಗುದೀಪ ಶ್ರೀನಿವಾಸ್​ ಅವರ ನಂತರ ದರ್ಶನ್​ಗೆ ತಂದೆ ಸ್ಥಾನದಲ್ಲಿದ್ದವರು ಎಂದರೆ ಅದು ಅಂಬಿ. ಹೌದು ದರ್ಶನ್​ ಕುಟುಂಬಕ್ಕೆ ಹಿರಿಯನಾಗಿ ರಕ್ಷಾ ಕವಚದಂದಿತ್ತ ಅಂಬಿ ಇನ್ನಿಲ್ಲ. ಗಾಡ್​ಫಾದರ್​ನಂತಿದ್ದ ಅಂಬಿಯ ಸಾವು ಕೇವಲ ಸಿನಿ ಜಗತ್ತಿಗೆ ಮಾತ್ರವಲ್ಲದೆ ದರ್ಶನ್​ ಕುಟುಂಬಕ್ಕೂ ತುಂಬಲಾರದ ನಷ್ಟ.

ಅಂಬಿ ತಮ್ಮೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ಸಹ ಕಲಾವಿದರನ್ನು ಕುಟುಂಬದವರಂತೆಯೇ ಕಾಣುತ್ತಿದ್ದರು. ಅದಕ್ಕಾಗಿಯೇ ಖಳನಟ ಸುದೀರ್​, ವಜ್ರಮುನಿ, ತೂಗುದೀಪ ಶ್ರೀನಿವಾಸ್​ ಹಾಗೂ ಇತರರಿಗೆ ಅಂಬಿ ಸಾಕಷ್ಟು ಸಹಾಯ ಮಾಡಿದ್ದಾರೆ.

ಅಷ್ಟೇ ಅಲ್ಲ ದರ್ಶನ್​ಗೂ ಅಗತ್ಯ ಬಿದ್ದಾಗಲೆಲ್ಲ ಬೆನ್ನೆಲುಬಾಗಿ ನಿಂತಿದ್ದರು ಅಂಬಿ. ಇದರಿಂದಾಗಿಯೇ ಅಂಬಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸ್ಟಾರ್​ ನಟರಾದ ದರ್ಶನ್​, ಸುದೀಪ್​ ಹಾಗೂ ಯಶ್​ ಪ್ರಚಾರಕ್ಕೆ ಹೋಗುತ್ತಿದ್ದರು. ಇದು ಅಂಬಿಯ ಬಗ್ಗೆ ಅವರಿಗಿದ್ದ ಗೌರವ ತೋರಿಸುತ್ತದೆ.

ಅದಕ್ಕಾಗಿಯೇ ವಿದೇಶದಲ್ಲಿ ‘ಯಜಮಾನ’ ಹಾಡಿನ ಚಿತ್ರೀಕರಣದಲ್ಲಿದ್ದ ದರ್ಶನ್​, ಎಲ್ಲ ಬಿಟ್ಟು ಬೆಂಗಳೂರಿಗೆ ಬಂದಿಳಿದ್ದಿದ್ದಾರೆ. ಹೌದು ವಿಷಯ ತಿಳಿದ ತಕ್ಷಣ ಚಿತ್ರೀಕರಣ ನಿಲ್ಲಿಸಿದ ‘ಡಿ-ಬಾಸ್’ ಕೂಡಲೇ ಬೆಂಗಳೂರಿನತ್ತ ಹೊರಟಿದ್ದಾರೆ. ಆದರೆ ಅಲ್ಲೂ ಹವಾಮಾನ ವೈಪರಿತ್ಯದ ಕಾರಣದಿಂದಾಗಿ ನಿನ್ನೆಯೇ ಬರಬೇಕಿದ್ದ ದರ್ಶನ್​ ಇಂದು ಬೆಳಿಗ್ಗೆ 9ಕ್ಕೆ ಬೆಂಗಳೂರಿಗೆ ಬಂದಿಳಿದಿದ್ದಾರೆ. ​

Comments are closed.