ತೂಗುದೀಪ ಶ್ರೀನಿವಾಸ್ ಅವರ ನಂತರ ದರ್ಶನ್ಗೆ ತಂದೆ ಸ್ಥಾನದಲ್ಲಿದ್ದವರು ಎಂದರೆ ಅದು ಅಂಬಿ. ಹೌದು ದರ್ಶನ್ ಕುಟುಂಬಕ್ಕೆ ಹಿರಿಯನಾಗಿ ರಕ್ಷಾ ಕವಚದಂದಿತ್ತ ಅಂಬಿ ಇನ್ನಿಲ್ಲ. ಗಾಡ್ಫಾದರ್ನಂತಿದ್ದ ಅಂಬಿಯ ಸಾವು ಕೇವಲ ಸಿನಿ ಜಗತ್ತಿಗೆ ಮಾತ್ರವಲ್ಲದೆ ದರ್ಶನ್ ಕುಟುಂಬಕ್ಕೂ ತುಂಬಲಾರದ ನಷ್ಟ.
ಅಂಬಿ ತಮ್ಮೊಂದಿಗೆ ಸಿನಿಮಾಗಳಲ್ಲಿ ಕೆಲಸ ಮಾಡುತ್ತಿದ್ದ ಸಹ ಕಲಾವಿದರನ್ನು ಕುಟುಂಬದವರಂತೆಯೇ ಕಾಣುತ್ತಿದ್ದರು. ಅದಕ್ಕಾಗಿಯೇ ಖಳನಟ ಸುದೀರ್, ವಜ್ರಮುನಿ, ತೂಗುದೀಪ ಶ್ರೀನಿವಾಸ್ ಹಾಗೂ ಇತರರಿಗೆ ಅಂಬಿ ಸಾಕಷ್ಟು ಸಹಾಯ ಮಾಡಿದ್ದಾರೆ.
ಅಷ್ಟೇ ಅಲ್ಲ ದರ್ಶನ್ಗೂ ಅಗತ್ಯ ಬಿದ್ದಾಗಲೆಲ್ಲ ಬೆನ್ನೆಲುಬಾಗಿ ನಿಂತಿದ್ದರು ಅಂಬಿ. ಇದರಿಂದಾಗಿಯೇ ಅಂಬಿ ಚುನಾವಣೆಯಲ್ಲಿ ಸ್ಪರ್ಧಿಸಿದಾಗ ಸ್ಟಾರ್ ನಟರಾದ ದರ್ಶನ್, ಸುದೀಪ್ ಹಾಗೂ ಯಶ್ ಪ್ರಚಾರಕ್ಕೆ ಹೋಗುತ್ತಿದ್ದರು. ಇದು ಅಂಬಿಯ ಬಗ್ಗೆ ಅವರಿಗಿದ್ದ ಗೌರವ ತೋರಿಸುತ್ತದೆ.
ಅದಕ್ಕಾಗಿಯೇ ವಿದೇಶದಲ್ಲಿ ‘ಯಜಮಾನ’ ಹಾಡಿನ ಚಿತ್ರೀಕರಣದಲ್ಲಿದ್ದ ದರ್ಶನ್, ಎಲ್ಲ ಬಿಟ್ಟು ಬೆಂಗಳೂರಿಗೆ ಬಂದಿಳಿದ್ದಿದ್ದಾರೆ. ಹೌದು ವಿಷಯ ತಿಳಿದ ತಕ್ಷಣ ಚಿತ್ರೀಕರಣ ನಿಲ್ಲಿಸಿದ ‘ಡಿ-ಬಾಸ್’ ಕೂಡಲೇ ಬೆಂಗಳೂರಿನತ್ತ ಹೊರಟಿದ್ದಾರೆ. ಆದರೆ ಅಲ್ಲೂ ಹವಾಮಾನ ವೈಪರಿತ್ಯದ ಕಾರಣದಿಂದಾಗಿ ನಿನ್ನೆಯೇ ಬರಬೇಕಿದ್ದ ದರ್ಶನ್ ಇಂದು ಬೆಳಿಗ್ಗೆ 9ಕ್ಕೆ ಬೆಂಗಳೂರಿಗೆ ಬಂದಿಳಿದಿದ್ದಾರೆ.
Comments are closed.