ಮನೋರಂಜನೆ

ಕನಸಾಗಿಯೇ ಉಳಿದ ಶ್ರೀದೇವಿಯ ಕೊನೆಯ ಆಸೆ….!

Pinterest LinkedIn Tumblr


ಮುಂಬಯಿ: ಹೃದಯಾಘಾತದಿಂದ ಇಹಲೋಕ ತ್ಯಜಿಸಿರುವ ಸಾಟಿಯಿಲ್ಲದ ನಟಿ ಶ್ರೀದೇವಿ ಅವರಿಗಿದ್ದ ಮಹದಾಸೆ ಈಡೇರದೆ ಹೋಗಿದೆ. ಹಿರಿಯ ಮಗಳಾದ ಜಾನ್ವಿನ್ನು ಹಿರಿತೆರೆಯ ಮೇಲೆ ನೋಡಬೇಕೆಂದು ಹಗಲಿರುಳು ಶ್ರಮ ಪಡುತ್ತಿದ್ದ ಶ್ರೀದೇವಿ ಚಿತ್ರ ಬಿಡುಗಡೆಗೂ ಮುನ್ನ ಯಾವ ಮುನ್ಸೂಚನೆ ಇಲ್ಲದೆ ಮರೆಯಾಗಿದ್ದಾರೆ.

ಜಾನ್ವಿಗೆ ನಟನಾ ತರಬೇತಿಯನ್ನೂ ಕೊಡಿಸಿ ,ಸ್ವಯಂ ಟಿಪ್ಸ್‌ಗಳನ್ನೂ ನೀಡುತ್ತಿದ್ದ ಶ್ರೀದೇವಿ ‘ಧಡಕ್‌’ ಎಂಬ ಹಿಂದಿ ಚಿತ್ರದ ಮೂಲಕ ಬಾಲಿವುಡ್‌ಗೆ ಪ್ರತಿನಿಧಿಯೊಂದನ್ನು ನೀಡಲು ಮುಂದಾಗಿದ್ದರು.

ಮರಾಠಿಯ ಬ್ಲಾಕ್‌ ಬಸ್ಟರ್‌ ಪ್ರೇಮಕಥೆ ‘ಸೈರಾತ್‌’ ಚಿತ್ರದ ರಿಮೇಕ್‌ ಆಗಿರುವ ಧಡಕ್‌ ಚಿತ್ರದಲ್ಲಿ ಜಾನ್ವಿ ನಾಯಕಿಯಾಗಿ ಶೂಟಿಂಗ್‌ನಲ್ಲಿ ನಿರತರಾಗಿರುವ ವೇಳೆಯಲ್ಲೇ ತಾಯಿ ಶ್ರೀದೇವಿ ದುಬೈನಲ್ಲಿ ಬಾರದ ಲೋಕಕ್ಕೆ ಮರಳಿದ್ದಾರೆ.

ತಾಯಿಯ ಹಠಾತ್‌ ಅಗಲುವಿಕೆ ಜಾನ್ವಿಗೆ ಬರಸಿಡಿಲು ಬಂದೆರಗಿದಂತಾಗಿದ್ದು, ತೀವ್ರ ದುಃಖೀತರಾಗಿದ್ದಾರೆ.

ಇತ್ತೀಚೆಗೆ ಮಗಳ ಉತ್ತಮ ಭವಿಷ್ಯಕ್ಕಾಗಿ ಆಂಧ್ರದ ದೇವಾಲಯವೊಂದಕ್ಕೆ ತೆರಳಿ ಸರ್ಪ ಸಂಬಂಧಿ ಪೂಜಾ ಪುನಸ್ಕಾರಗಳನ್ನೂ ನೆರವೇರಿಸಿದ್ದರು ಎಂದು ತಿಳಿದು ಬಂದಿದೆ.

ಮಕ್ಕಳಿಬ್ಬರ ಉಜ್ವಲ ಭವಿಷ್ಯಕ್ಕಾಗಿ ಅಪಾರ ಕನಸು ಕಂಡಿದ್ದ ಶ್ರೀದೇವಿ ಪುತ್ರಿಯ ಮೊದಲ ಚಿತ್ರ ತೆರೆಕಾಣುವ ಮುನ್ನವೆ ಮರೆಯಾಗಿದ್ದಾರೆ.

-ಉದಯವಾಣಿ

Comments are closed.