ಬಿಗ್ಬಾಸ್ ಮನೆಯಿಂದ ರನ್ನರ್ ಅಪ್ ಪಟ್ಟದೊಂದಿಗೆ ಹೊರ ಬಂದಿರುವ ದಿವಾಕರ್ ಸದ್ಯ ಏನು ಮಾಡುತ್ತಿದ್ದಾರೆ? ಬಿಗ್ಬಾಸ್ ಮನೆಯಿಂದ ಅವರಿಗೆ ಎಷ್ಟು ಹಣ ದೊರೆಯಿತು ಎಂಬಿತ್ಯಾದಿ ಹಲವಾರು ಪ್ರಶ್ನೆಗಳು ಕೇಳಿ ಬರುತ್ತಿವೆ.
ಇದರ ನಡುವೆಯೇ ಬಿಗ್ಬಾಸ್ ಮನೆಯಿಂದ ಹೊರ ಬಂದ ದಿವಾಕರ್ ಅವರಿಗೆ ಕಿಚ್ಚ ಸುದೀಪ್, ಆರ್ಥಿಕವಾಗಿ ಸಹಾಯ ಮಾಡುವುದರ ಜತೆಗೆ ದಿವಾಕರ್ ಬೆಂಬಲಕ್ಕೆ ನಿಂತಿರುವ ಸುದ್ದಿ ಸದ್ಯ ಹೊರ ಬಿದ್ದಿದೆ.
ಹೌದು, ಸಾಮಾನ್ಯ ವ್ಯಕ್ತಿ ದಿವಾಕರ್ ಅವರಿಗೆ ಬಿಗ್ಬಾಸ್ ಮನೆಯಿಂದ ಸಾಕಷ್ಟು ಹಣ ಸಿಗಲಿಲ್ಲ ಎನ್ನುವ ಕೂಗು ಕೇಳಿ ಬಂದಿತ್ತು. ಇದೇ ವೇಳೆ ಅಭಿನಯ ಚಕ್ರವರ್ತಿ ಸುದೀಪ್, ದಿವಾಕರ್ ಅವರಿಗೆ ಪರ್ಸನಲ್ ಆಗಿ ಸಹಾಯ ಮಾಡಿದ್ದಾರೆ. ದಿವಾಕರ್ ದಂಪತಿಯನ್ನು ಮನೆಗೆ ಕರೆಯಿಸಿಕೊಂಡಿದ್ದ ಸುದೀಪ್, ಇವರಿಗೆ ಆರ್ಥಿಕವಾಗಿ ಸಹಾಯ ಮಾಡಿದ್ದಾರೆ.
ಕನ್ನಡದ ಖಾಸಗಿ ವಾಹಿನಿಗೆ ನೀಡಿರುವ ಸಂದರ್ಶನದಲ್ಲಿ ಕಿಚ್ಚ ಸುದೀಪ್ರ ಔದಾರ್ಯತೆಯನ್ನು ಬಿಚ್ಚಿಟ್ಟಿದ್ದಾರೆ ದಿವಾಕರ್. ”ತಮ್ಮನ್ನು ಸುದೀಪ್ ಅವರು ಪ್ರೀತಿಯಿಂದ ನಡೆಸಿಕೊಂಡ್ರು. ಒಂದು ದೊಡ್ಡ ಮೊತ್ತದ ಹಣ ನೀಡಿದ್ರು. ಈ ಹಣದಿಂದಲೇ ನಾನು ಮನೆಯನ್ನು ಕಟ್ಟಿಕೊಳ್ಳಲು ಯೋಚಿಸಿದ್ದೇನೆ. ಜತೆಗೆ ತಮ್ಮ ಮುಂದಿನ ಚಿತ್ರಗಳಲ್ಲಿ ನಂಗೆ ಅವಕಾಶ ನೀಡುವುದಾಗಿ ಭರವಸೆ ನೀಡಿದ್ದಾರೆ ಸುದೀಪ್ ಸರ್” ಎಂದು ದಿವಾಕರ್ ತಮ್ಮ ಮನದಾಳದ ಮಾತು ಬಿಚ್ಚಿಟ್ಟಿದ್ದಾರೆ.
ಇನ್ನು ಸುದೀಪ್ ಎಷ್ಟು ಹಣ ನೀಡಿದ್ರು ಎಂಬುದನ್ನು ಬಹಿರಂಗಗೊಳಿಸದ ದಿವಾಕರ್, ಸುದೀಪ್ ಅವರು ಪಬ್ಲಿಸಿಟಿ ಬಯಸುವುದಿಲ್ಲ. ಅವರು ನಮ್ಮ ಪಾಲಿಗೆ ದೇವರು ಎಂದು ಹೇಳಿದ್ದಾರೆ.
Comments are closed.