ಮನೋರಂಜನೆ

ಬಿಗ್‌ಬಾಸ್ ಸ್ಪರ್ಧಿ ಶೃತಿ ಪ್ರಕಾಶ್’ಗೆ ಹುಡುಕಿಕೊಂಡು ಬಂದ ಅದೃಷ್ಟ ! ಮಿಂಚಲಿದ್ದಾರೆ ಶೃತಿ ಪ್ರಕಾಶ್…

Pinterest LinkedIn Tumblr

ಕನ್ನಡದ ಬಿಗ್‌ಬಾಸ್ ರಿಯಾಲಿಟಿ ಶೋನಲ್ಲಿ ಭಾಗವಹಿಸಿದ್ದ ಶೃತಿ ಪ್ರಕಾಶ್ ಅವರಿಗೆ ಅದೃಷ್ಟದ ಬಾಗಿಲು ತೆರದಂತಿದೆ. ಕಳೆದ ಬಿಗ್‌ಬಾಸ್ ಕಾರ್ಯಕ್ರಮದಲ್ಲಿ ಹಲವು ಪ್ರತಿಭೆಗಳ ಅನಾವರಣಗೊಂಡಿದ್ದು ಅದರಲ್ಲಿ ಬಿಗ್‌ಬಾಸ್ ಅಂತಿಮ ಸುತ್ತಿನ ಸ್ಪರ್ಧಿ ಶೃತಿ ಪ್ರಕಾಶ್ ಸಹ ಒಬ್ಬರು.

ಇದೀಗ ಶೃತಿ ಪ್ರಕಾಶ್ ಅವರಿಗೆ ಸ್ಯಾಂಡಲ್‌ವುಡ್‌ ನಿಂದ ಹಲವು ಆಫರ್ ಗಳು ಬರುತ್ತಿವೆಯಂತೆ. ಇದರಲ್ಲಿ ಪ್ರಮುಖವಾಗಿ ಕಲಾ ಸಾಮ್ರಾಟ್ ಎಸ್ ನಾರಾಯಣ್ ಅವರು ತಮ್ಮ ಮುಂದಿನ ನಿರ್ದೇಶನದ ಚಿತ್ರಕ್ಕೆ ಶೃತಿ ಪ್ರಕಾಶ್ ಅವರೊಂದಿಗೆ ಚರ್ಚಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಎಲ್ಲಾ ಅಂದುಕೊಂಡಂತೆ ಆದರೆ ಎಸ್ ನಾರಾಯಣ್ ನಿರ್ದೇಶನದ ಚಿತ್ರದ ಮೂಲಕ ಶೃತಿ ಪ್ರಕಾಸ್ ಸ್ಯಾಂಡಲ್ವುಡ್ಗೆ ಪಾದಾರ್ಪಣೆ ಮಾಡಲಿದ್ದಾರೆ. ಶೃತಿ ಪ್ರಕಾಶ್ ಬೆಳಗಾವಿಯಲ್ಲಿ ವಿದ್ಯಾಬ್ಯಾಸ ಮುಗಿಸಿದ್ದು ಮುಂಬೈನಲ್ಲಿ ನೆಲೆಸಿದ್ದಾರೆ. ಗಾಯಕಿಯಾಗಿರುವ ಶೃತಿ ಹಿಂದಿಯ ಧಾರಾವಾಹಿಯಲ್ಲಿ ಅಭಿನಯಿಸುತ್ತಿದ್ದಾರೆ.

ಪುತ್ರ ಪಂಕಜ್ ಗಾಗಿ ಎಸ್ ನಾರಾಯಣ್ ಈ ಚಿತ್ರ ಮಾಡುತ್ತಿದ್ದು ಚಿತ್ರಕ್ಕೆ ಬಿಗ್ ಬಾಸ್ ವಿನ್ನರ್ ಚಂದನ್ ಶೆಟ್ಟಿ ಸಂಗೀತ ಸಂಯೋಜನೆ ಮಾಡಲಿದ್ದಾರೆ.

Comments are closed.