ಮನೋರಂಜನೆ

ಕ್ಯಾನ್ಸರ್‌ ಪೀಡಿತ ಅಭಿಮಾನಿಯ ಆಸೆ ನೆರವೇರಿಸಿದ ದರ್ಶನ್

Pinterest LinkedIn Tumblr


ಕ್ಯಾನ್ಸರ್‌ ಕಾಯಿಲೆಯಿಂದ ಬಳಲುತ್ತಿರುವ ರೇವಂತ್‌ ಅವರು ದರ್ಶನ್ ಅವರ ಕಟ್ಟಾ ಅಭಿಮಾನಿ. ಸಾವಿನೊಂದಿಗೆ ಗುದ್ದಾಡುತ್ತಿರುವ ರೇವಂತ್‌ ದರ್ಶನ್‌ ಜತೆ ಮಾತನಾಡಬೇಕೆಂಬ ಆಸೆ ವ್ಯಕ್ತ ಪಡಿಸಿದರು.

ಈ ವಿಷಯವನ್ನು ದರ್ಶನ್‌ ಅಭಿಮಾನಿಗಳು ಸಾಮಾಜಿಕ ತಾಣದಲ್ಲಿ ಹಾಕಿದ ಕೆಲವೇ ಗಂಟೆಗಳಲ್ಲಿ ದರ್ಶನ್ ತಮ್ಮ ಅಭಿಮಾನಿಗೆ ವೀಡಿಯೋ ಕಾಲ್‌ ಮಾಡಿ ರೇವಂತ್‌ ಯೋಗಕ್ಷೇಮ ವಿಚಾರಿಸಿ, ಮನೆಯವರೊಂದಿಗೆ ಮಾತನಾಡಿ ಸಾಂತ್ವನ ಹೇಳಿದ್ದಾರೆ.

ಈ ಹಿಂದೆ ರೇವಂತ್ ತನ್ನ ಮೆಚ್ಚಿನ ನಟನನ್ನು ಹಲವಾರು ಬಾರಿ ಭೇಟಿಯಾಗಿ ಫೋಟೋ ಕೂಡ ತೆಗೆಸಿಕೊಂಡಿದ್ದರು.

Comments are closed.