ಬೆಂಗಳೂರು: ಮತ್ತೆ ಸುದ್ದಿಯಲ್ಲಿದ್ದಾರೆ ಬಿಗ್ಬಾಸ್ ವಿನ್ನರ್ ಚಂದನ್ ಶೆಟ್ಟಿ. ಈ ಬಾರಿ ಅವರ ಖಾಸಗಿ ವಿಷಯಕ್ಕೆ ಸಂಬಂಧಿಸಿದ್ದು. ಅದೇ ಅವರ ಮದುವೆ ವಿಚಾರ !
ರ್ಯಾಪರ್ ಚಂದನ್ ಶೆಟ್ಟಿ ಬಗ್ಗೆಯೇ ಎಲ್ಲೆಡೆಯೂ ಮಾತು ಕೇಳಿಬರುತ್ತಿದೆ. ಹೌದು ಚಂದನ್ ಬಿಗ್ ಮನೆಯಲ್ಲಿದ್ದಾಗ ಒಮ್ಮೆ ಮನೆಗೆ ಬಂದಿದ್ದ ಚಂದನ್ ಶೆಟ್ಟಿ ತಂದೆ ನಿನಗೆ ಮದುವೆ ಮಾಡಿಸುವುದಾಗಿ ಹೇಳಿದ್ದರು. ಅಂತೆಯೇ ಈಗ ಚಂದನ್ ಶೆಟ್ಟಿಗೆ ಮದುವೆ ಮಾಡಿಸಲು ಮುಂದಾಗಿದ್ದಾರೆ.
ರ್ಯಾಪರ್ ಚಂದನ್ ಶೆಟ್ಟಿ ಬಿಗ್ಬಾಸ್ ಮನೆಯಲ್ಲಿರುವಾಗಲೇ ನಾನು ಮದುವೆಯಾಗೋ ಹುಡುಗಿ ಗೃಹಿಣಿಯಾಗಿರಬೇಕು. ತನ್ನ ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಬೇಕು….ಹೀಗೆ ಅನೇಕ ಷರತ್ತುಗಳನ್ನು ಹಾಕಿದ್ದರು. ಅಲ್ಲದೆ ಶೃುತಿ ಮೇಲೆ ಚಂದನ್ಗೆ ಕ್ರಶ್ ಆಗಿದೆ ಎಂದೆಲ್ಲಾ ಸಾಮಾಜಿ ಜಾಲತಾಣಗಳಲ್ಲಿ ಹೇಳಲಾಗುತ್ತಿತ್ತು.
ಆದರೆ ಈಗ ಎಲ್ಲಾ ಊಹಾಪೋಹಗಳಿಗೂ ತೆರೆಬಿದ್ದಿದ್ದು, ಚಂದನ್, ಅಗ್ನಿಸಾಕ್ಷಿ ಧಾರಾವಾಹಿ ಖ್ಯಾತಿಯ ಸನ್ನಿಧಿ (ವೈಷ್ಣವಿ)ಯವರನ್ನು ಮದುವೆಯಾಗಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ಇದೇ ಫೆಬ್ರವರಿ 11ರಂದು ನಿಶ್ಚಿತಾರ್ಥ ನಡೆಯಲಿದೆ ಎಂದು ಬಲ್ಲ ಮೂಲಗಳು ಹೇಳುತ್ತಿವೆ. ಈ ಸುದ್ದಿ ಸತ್ಯವೋ ಸುಳ್ಳೊಎಂಬುದನ್ನು ಸದ್ಯ ಚಂದನ್ ಶೆಟ್ಟಿಯೇ ಸ್ಪಷ್ಟಪಡಿಸಬೇಕು.
Comments are closed.