ಬಾಹುಬಲಿ ಚಿತ್ರದ ಮೂಲಕ ‘ಕಟ್ಟಪ್ಪ ಬಾಹುಬಲಿಯನ್ನೇಕೆ ಕೊಂದ?’ ಎಂಬ ಪ್ರಶ್ನೆಯನ್ನು ಪ್ರೇಕ್ಷಕರ ತಲೆಯಲ್ಲಿ ಬಿಟ್ಟು ‘ಬಾಹುಬಲಿ -2’ ಚಿತ್ರಕ್ಕಾಗಿ ಕಾಯುವಂತೆ ಮಾಡಿದ್ದರು ನಿರ್ದೇಶಕ ಎಸ್ಎಸ್ ರಾಜಮೌಳಿ. ‘ಬಾಹುಬಲಿ 2’ ಚಿತ್ರದ ನಂತರ ರಾಜಮೌಳಿ ಏನು ಮಾಡುತ್ತಾರೆ ಎಂಬ ಕುತೂಹಲ ಸಹಜವಾಗಿ ಎಲ್ಲರಲ್ಲೂ ಇದೆ.
ಆದರೆ ‘ಬಾಹುಬಲಿ’ ನಿರ್ದೇಶಕ ಮಾತ್ರ ಆ ಕುತೂಹಲವನ್ನು ಮತ್ತಷ್ಟು ಹೆಚ್ಚಿಸಿದ್ದಾರೆ. ತಮ್ಮ ಟ್ವಿಟರ್ ಖಾತೆಯಲ್ಲಿ ಫೋಟೋವೊಂದನ್ನು ಪೋಸ್ಟ್ ಮಾಡುವ ಮೂಲಕ ಎಲ್ಲರ ತಲೆಯಲ್ಲಿ ಹುಳ ಬಿಟ್ಟಿದ್ದಾರೆ ರಾಜಮೌಳಿ. ಬಹುಶಃ ಎಲ್ಲರೂ ತಲೆ ಕೆಡಿಸಿಕೊಳ್ಳುವುದನ್ನು ನೋಡಲು ರಾಜಮೌಳಿಗೆ ಇಷ್ಟ ಅನಿಸುತ್ತೆ.
ಹಾಗಾಗಿಯೇ ರಾಜಮೌಳಿ ಟ್ವೀಟ್ ಮಾಡಿರುವ ಫೋಟೋದಲ್ಲಿ ಟಾಲಿವುಡ್ ಸ್ಟಾರ್ಗಳಾದ ರಾಮ್ ಚರಣ್ ಮತ್ತು ಜ್ಯೂನಿಯರ್ ಎನ್ಟಿಆರ್ ಇದ್ದಾರೆ. ಫೋಟೋ ಮೇಲೆ ಏನನ್ನೂ ಬರೆಯದೇ ಚುಕ್ಕಿಗಳನ್ನಿಟ್ಟು ಸ್ಮೈಲೀ ಹಾಕಿದ್ದಾರೆ. ರಾಜಮೌಳಿ ನಿರ್ದೇಶನದ ಮುಂದಿನ ಚಿತ್ರದಲ್ಲಿ ಈ ಸ್ಟಾರ್ ನಟರು ಇರ್ತಾರಾ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈ ಕುತೂಹಲವನ್ನು ರಾಜಮೌಳಿಯೇ ತಣಿಸಬೇಕು.
Comments are closed.