ಶುಕ್ರವಾರ ಬಿಗ್ಬಾಸ್ ಮನೆಯ ಸದಸ್ಯರಿಗೆ ಆತಂಕವನ್ನು ಹೊತ್ತು ತರುತ್ತೆ. ಆಯಾ ವಾರಕ್ಕೆ ನಾಮಿನೇಟ್ ಆಗಿರುವ ಸ್ಪರ್ಧಿಗಳ ಹೃದಯದಲ್ಲಿ ಒಂದು ರೀತಿಯ ಅಳುಕು ಕಾಣಿಸಿಕೊಳ್ಳುತ್ತೆ.
ಈ ಶುಕ್ರವಾರವೂ ಇಂತಹದ್ದೇ ಅಳಕು, ನೋವು, ಗಾಬರಿ ಈ ವಾರಕ್ಕೆ ಎಲಿಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಗೋಚರಿಸಿತು. ಈ ವಾರ ಮನೆಯಿಂದ ಹೊರ ಹೋಗಲು ಆಶಿತಾ, ಚಂದ್ರು, ಜಗನ್, ನಿವೇದಿತಾ, ದಿವಾಕರ್ ಹಾಗೂ ಕೃಷಿ ನಾಮಿನೇಟ್ ಆಗಿದ್ದಾರೆ. ಈ ಆರು ಜನರಲ್ಲಿ ಯಾರಾದರೂ ಒಬ್ಬರು ಇಂದು ಬಿಗ್ಬಾಸ್ ಮನೆಯ ಪ್ರಯಾಣ ಮುಗಿಸಬೇಕಾಗುತ್ತೆ.
ಈ ವಾರ ಯಾರು ಎಲಿಮಿನೇಟ್ ಆಗಬಹುದು ಎನ್ನುವ ಪ್ರಶ್ನೆ ಮನೆಯ ಸದಸ್ಯರಲ್ಲಿ ಮೂಡಿದೆ. ಎಲ್ಲರೂ ತಮ್ಮದೆಯಾದ ಲೆಕ್ಕಾಚಾರ ಹಾಕಿಕೊಂಡಿದ್ದಾರೆ. ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿ ಆತಂಕ ಮನೆ ಮಾಡಿದೆ. ತಮ್ಮಲ್ಲಿರುವ ನೋವನ್ನು ಇತರೆ ಸ್ಪರ್ಧಿಗಳ ಮುಂದೆ ಸಿಹಿ ಕಹಿ ಚಂದ್ರು ಅವರು ನಿನ್ನೆ ಹಂಚಿಕೊಂಡ್ರು. ನಾಳೆ ಬಿಗ್ಬಾಸ್ ಮನೆಯಿಂದ ನಾನು ಹೊರ ಹೋಗುತ್ತೇನೆ ಎಂದು ಹೇಳಿದ್ರು. ಆದರೆ, ದಿವಾಕರ್, ಅನುಪಮಾ, ಚಂದನ್ ಅವರು ಚಂದ್ರು ಅವರಿಗೆ ಧೈರ್ಯ ತುಂಬಿದ್ರು. ನೀವು ಎಲಿಮಿನೇಟ್ ಆಗುವುದಿಲ್ಲ ಎಂದು ಹೇಳುವ ಮೂಲಕ ಸಮಾಧಾನ ಪಡಿಸಿದ್ರು.
ಒಟ್ಟಿನಲ್ಲಿ ನಾಮಿನೇಟ್ ಆಗಿರುವ ಸ್ಪರ್ಧಿಗಳಲ್ಲಿರುವ ಪ್ರಶ್ನೆ ಬಿಗ್ಬಾಸ್ ವೀಕ್ಷಕರಲ್ಲಿಯೂ ಇದೆ. ಈ ಪ್ರಶ್ನೆಗೆ ಉತ್ತರ ಸಿಗಬೇಕಾದ್ರೆ ಇಂದು ರಾತ್ರಿ ನಡೆಯುವ ‘ವಾರದ ಕಥೆ ಕಿಚ್ಚನ ಜತೆ’ ಎಪಿಸೋಡನ್ನು ತಪ್ಪದೇ ನೋಡಿ.
Comments are closed.