ಬಿಗ್ಬಾಸ್ ಸೀಸನ್ 5 ಶುರುವಾದಾಗಿನಿಂದ ಎಲ್ಲವನ್ನೂ ನಿಭಾಯಿಸಿಕೊಂಡು ಹೋಗಬಲ್ಲ ಸಮರ್ಥ ನಾಯಕ ಇದುವರೆಗೆ ಬಿಗ್ ಮನೆಗೆ ಸಿಕ್ಕಿಲ್ಲ ಎಂದು ಹೇಳಬಹುದು. ಕಳೆದ ವಾರ ಕ್ಯಾಪ್ಟನ್ ಆಗಿ ಆಯ್ಕೆಯಾಗಿದ್ದ ರಿಯಾಜ್ ಸಹ ಒಂದಿಷ್ಟು ವಿಚಾರದಲ್ಲಿ ಎಡವಿದ್ದೂ ಉಂಟು.
ಈವರೆಗೆ ಬಿಗ್ ಮನೆಯ ಕ್ಯಾಪ್ಟನ್ಶಿಪ್ ವಹಿಸಿಕೊಂಡ 4 ಸ್ಪರ್ಧಿಗಳು ಒಂದಿಲ್ಲೊಂದು ರೀತಿಯಲ್ಲಿ ವಿಫಲರಾದರು ಎಂದು ಹೇಳಬಹುದು. ಸದ್ಯಕ್ಕೆ ಐದನೇ ಕ್ಯಾಪ್ಟನ್ ಆಗಿ ಆಯ್ಕೆಯಾಗಿರುವ ಚಂದನ್ ಶೆಟ್ಟಿ, ಯಾವ ರೀತಿಯಲ್ಲಿ ಮನೆ ಹಾಗೂ ಮನೆಯ ಸದಸ್ಯರನ್ನು ಸಂಭಾಳಿಸುತ್ತಾರೆ ಎನ್ನುವ ಕುತೂಹಲ ಎಲ್ಲರಲ್ಲೂ ಇದೆ.
ಹೌದು, ಸೋಮವಾರದ ಎಪಿಸೋಡ್ನಲ್ಲಿ ಮನೆಯ ಕ್ಯಾಪ್ಟನ್ ಆಯ್ಕೆಗಾಗಿ ಒಂದು ವಿಶೇಷ ಚಟುವಟಿಕೆಯನ್ನು ನೀಡಿದ್ದರು ಬಿಗ್ಬಾಸ್. ಈ ಚಟುವಟಿಕೆಯಲ್ಲಿ ಕೊನೆವರೆಗೂ ಉಳಿದಿದ್ದು ನಿವೇದಿತಾ ಗೌಡ ಮತ್ತು ಚಂದನ್ ಶೆಟ್ಟಿ. ಇವರಿಬ್ಬರಲ್ಲಿ ಅಂತಿಮವಾಗಿ ಮನೆಯ ಐದನೇ ಕ್ಯಾಪ್ಟನ್ ಆಗಿ ಚಂದನ್ ಆಯ್ಕೆಯಾದರು.
ಮತ್ತೊಂದು ವಿಶೇಷ ಏನಪ್ಪಾ ಅಂದರೆ ಸೋಮವಾರದ ಎಪಿಸೋಡ್ನಲ್ಲಿ ನಾಮಿನೇಷನ್ ಪ್ರಕ್ರಿಯೆ ವಿಭಿನ್ನವಾಗಿ ನಡೆಯಿತು. ಗಾರ್ಡನ್ ಏರಿಯಾದಲ್ಲಿ ನಡೆದ ನಾಮಿನೇಷನ್ ಪ್ರಕ್ರಿಯೆಯಲ್ಲಿ, ಸ್ಪರ್ಧಿಗಳು ನಾಮಿನೇಟ್ ಮಾಡಲು ಇಚ್ಛಿಸುವ ಸ್ಪರ್ಧಿಯ ಭಾವಚಿತ್ರದ ಬ್ಲಾಕ್ಗಳನ್ನು ಬೆಂಕಿಯಲ್ಲಿ ಹಾಕಬೇಕಿತ್ತು. ಅಷ್ಟೇ ಅಲ್ಲದೆ ಆಯ್ಕೆಗೆ ಸೂಕ್ತ ಕಾರಣವನ್ನು ಹೇಳಬೇಕಿತ್ತು.
ಹೀಗೆ ಮನೆಯ ಸದಸ್ಯರ ಮತಗಳ ಅನುಸಾರ ಈ ವಾರ ಮನೆಯಿಂದ ಹೊರ ಹೋಗಲು ರಿಯಾಜ್, ನಿವೇದಿತಾ, ಕೃಷಿ, ಸಿಹಿ ಕಹಿ ಚಂದ್ರು, ಜಗನ್, ಆಶಿತಾ ಮತ್ತು ದಿವಾಕರ್ ನಾಮಿನೇಟ್ ಆಗಿದ್ದರು. ಆದರೆ ಮನೆಯ ಕ್ಯಾಪ್ಟನ್ ಚಂದನ್ ಶೆಟ್ಟಿ ರಿಯಾಜ್ ಅವರನ್ನು ಸೇಫ್ ಮಾಡಿದರು.
ನಿರೀಕ್ಷೆಯಂತೆ, ನಾಮಿನೇಷನ್ ಪ್ರಕ್ರಿಯೆಯಲ್ಲಿ ರಿಯಾಝ್ ವಿರುದ್ಧ ಅತಿ ಹೆಚ್ಚು ಮತಗಳು ಲಭ್ಯವಾದವು. ಆದ್ರೆ, ಚಂದನ್ ಶೆಟ್ಟಿ ಕೃಪೆಯಿಂದ ಕ್ಷಣಾರ್ಧದಲ್ಲಿ ರಿಯಾಝ್ ಸೇಫ್ ಆಗ್ಹೋದರು. ರಿಯಾಝ್ ಭಾವಚಿತ್ರದ ಬ್ಲಾಕ್ ಗಳನ್ನು ಬೆಂಕಿಗಾಹುತಿ ಮಾಡಿದವರಿಗೆ ಮುಖಭಂಗವಾದಂತೆ ಆಯಿತು.
Comments are closed.