ಮಥುರಾ: ಮಥುರಾ ರೈಲ್ವೆ ನಿಲ್ದಾಣದ ಬಳಿಕ ಗೂಳಿ ದಾಳಿಯಿಂದ ಬಿಜೆಪಿ ಸಂಸದೆ ಹೇಮಮಾಲಿನಿ ಪಾರಾದ ಬಳಿಕ, ನಿಲ್ದಾಣದ ವ್ಯವಸ್ಥಾಪಕಿಯನ್ನು ಅಮಾನತು ಮಾಡಲಾಗಿದೆ.
ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಂಡಿಲ್ಲ ಎಂದು ಆರೋಪಿಸಿ ರೈಲ್ವೆ ನಿಲ್ದಾಣದ ವ್ಯವಸ್ಥಾಪಕಿ ಕೆ ಎಲ್ ಮೀನಾರನ್ನು ಅಮಾನತುಗೊಳಿಸಲಾಗಿದೆ. ಅಲ್ಲದೇ ಇವರ ವಿರುದ್ಧ ತನಿಖೆಗೆ ಆಗ್ರಹಿಸಲಾಗಿದೆ ಎಂದು ಉತ್ತರ ಕೇಂದ್ರ ರೈಲ್ವೆ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಸಂಚಿತ್ ತ್ಯಾಗಿ ಅವರು ಹೇಳಿದ್ದಾರೆ.
ಮಥುರಾದ ಬಿಜೆಪಿ ಸಂಸದೆ ಹೇಮಮಾಲಿನಿ ಮಥುರಾ ರೈಲು ನಿಲ್ದಾಣದ ನವೀಕರಣದ ಕುರಿತು ಪರಿಶೀಲನೆಗೆ ತೆರಳಿದ್ದಾಗ ಫ್ಲಾಟ್ ಫಾರಂ ಮೇಲೆ ಗೂಳಿಯೊಂದು ಹೇಮಮಾಲಿನಿಯನ್ನು ತಿವಿಯಲು ಮುಂದಾಗಿತ್ತು. ಈ ವೇಳೆ ಹಿಂದಕ್ಕೆ ಸರಿದ ಹೇಮಮಾಲಿನಿ ಕೂದಲೆಳೆ ಅಂತರದಲ್ಲಿ ಪಾರಾಗಿದ್ದರು ಎಂದು ತ್ಯಾಗಿ ಅವರು ಹೇಳಿದ್ದಾರೆ.
Comments are closed.