ಮನೋರಂಜನೆ

ಮತ್ತೆ ಕಿರುತೆರೆಯತ್ತ ಮುಖ ಮಾಡಿದ ಚಿನ್ನು ಆಲಿಯಾಸ್ ಕವಿತಾ ಗೌಡ

Pinterest LinkedIn Tumblr


ಬೆಂಗಳೂರು: ಕಲರ್ಸ್ ಸೂಪರ್ ವಾಹಿನಿಯಲ್ಲಿ ಪ್ರಸಾರವಾಗುತ್ತಿದ್ದ ಲಕ್ಷ್ಮಿ ಬಾರಮ್ಮ ಧಾರವಾಹಿಯಿಂದ ಹೊರ ಬಂದು ತೆಲುಗು ಧಾರವಾಹಿ, ಕನ್ನಡ ಸಿನಿಮಾ ಎಂದು ಓಡಾಡಿಕೊಂಡಿದ್ದ ಚಿನ್ನು ಆಲಿಯಾಸ್ ಕವಿತಾ ಗೌಡ ಮತ್ತೆ ಕನ್ನಡ ಧಾರವಾಹಿಗೆ ಮರಳಿದ್ದಾರೆ.

ಆದರೆ ಈ ಬಾರಿ ಅವರು ತೆರೆಯಲ್ಲಿ ಕಾಣಿಸಿಕೊಳ್ಳುತ್ತಿರುವುದು ಕಲರ್ಸ್ ವಾಹಿನಿಯಲ್ಲಲ್ಲ. ಫಾರ್ ಎ ಚೇಂಜ್ ಜೀ ಕನ್ನಡ ವಾಹಿನಿಯಲ್ಲಿ. ‘ವಿದ್ಯಾ ವಿನಾಯಕ’ ಎಂಬ ಹೊಸ ಧಾರವಾಹಿಯಲ್ಲಿ ಕವಿತಾ ಗೌಡ ನಾಯಕಿ ಪಾತ್ರ ನಿರ್ವಹಿಸಲಿದ್ದಾರೆ.

ಇದೇ ಸೋಮವಾರ ರಾತ್ರಿ 8 ಗಂಟೆಗೆ ವಿದ್ಯಾ ವಿನಾಯಕ ಧಾರವಾಹಿ ಪ್ರಸಾರವಾಗಲಿದೆ. ಯಶಸ್ವೀ ಉದ್ಯಮಿ, ಪಕ್ಕಾ ಪ್ರಾಕ್ಟಿಕಲ್ ಹುಡುಗ ವಿನಾಯಕ ಮತ್ತು ಜೀವನವನ್ನು ಸಿಂಪಲ್ ಎಂದು ತಿಳಿದುಕೊಂಡಿರುವ ವಿದ್ಯಾ ನಡುವಿನ ಪ್ರೀತಿಯ ಕತೆ ‘ವಿದ್ಯಾ ವಿನಾಯಕ’.

Comments are closed.