ಮನೋರಂಜನೆ

ನಾಗಾಭರಣ ನಿರ್ದೇಶನದ ‘ಅಲ್ಲಮ’ 26ರಂದು ಬಿಡುಗಡೆ

Pinterest LinkedIn Tumblr


ಬೆಂಗಳೂರು: 12ನೇ ಶತಮಾನದ ವಚನಕಾರ ಅಲ್ಲಮ ಪ್ರಭುವಿನ ಬದುಕು–ವಚನಗಳ ಕುರಿತಾದ ಚಿತ್ರ ‘ಅಲ್ಲಮ’ ಇದೇ ತಿಂಗಳ 26ರಂದು ತೆರೆ ಕಾಣಲಿದೆ.

ಭಾರತೀಯ ಅಂತರರಾಷ್ಟ್ರೀಯ ಸಿನಿಮೋತ್ಸವದ ಐಸಿಎಫ್‌ಟಿ ಯುನೆಸ್ಕೊ ಗಾಂಧಿ ಪದಕ ವಿಭಾಗಕ್ಕೆ 2016ರಲ್ಲಿ ಅಲ್ಲಮ ಸಿನಿಮಾ ನಾಮನಿರ್ದೇಶನಗೊಂಡು ಸುದ್ದಿಯಾಗಿತ್ತು.

ಟಿ.ಎಸ್‌. ನಾಗಾಭರಣ ನಿರ್ದೇಶನದ ಈ ಸಿನಿಮಾದಲ್ಲಿ ಧನಂಜಯ್‌, ಮೇಘನಾ ರಾಜ್, ‘ಸಂಚಾರಿ’ ವಿಜಯ್‌ ಹಾಗೂ ಲಕ್ಷ್ಮೀ ಗೋಪಾಲಸ್ವಾಮಿ ಸೇರಿದಂತೆ ಮುಂತಾದವರು ನಟಿಸಿದ್ದಾರೆ.

ಜಿ.ಎಸ್‌.ಭಾಸ್ಕರ್‌ ಛಾಯಾಗ್ರಹಣ ಹಾಗೂ ಬಾಪು ಪದ್ಮನಾಭ ಅವರ ಸಂಗೀತವಿದೆ. ಶ್ರೀಹರಿ ಎಲ್‌.ಖೋಡೆ ಚಿತ್ರದ ನಿರ್ಮಾಪಕರು.

ಜನವರಿ 26ರಂದು ರಾಜ್ಯದಾದ್ಯಂತ ಅಲ್ಲಮ ಚಿತ್ರ ಬಿಡುಗಡೆಯಾಗಲಿದೆ.

Comments are closed.