ಶನಿವಾರ ಬಿಗ್ಬಾಸ್ ಮನೆಯಿಂದ ಚೈತ್ರ ಔಟ್ ಆಗಿ ಹೊರಹೋಗುತ್ತಿದ್ದಂತೆ ರವಿವಾರ ಕನಸಿನ ರಾಣಿ ಮಾಲಾಶ್ರೀ ಹೊಸ ಅತಿಥಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಮಾಲಾಶ್ರೀ ಎಂಟ್ರಿ ಆಗುತ್ತಿದ್ದಂತೆ ಮನೆಯಲ್ಲಿನ ವಾತಾವರಣವೇ ಬದಲಾಗಿದೆ.
ಈಗ ಕನ್ನಡದ ಬಿಗ್ ಬಾಸ್ ನಾಲ್ಕನೇ ಆವೃತ್ತಿ ರಂಗೇರುತ್ತಿದ್ದು, ರವಿವಾರ ಎಲ್ಲವೂ ಮಾತುಕತೆ ಕೂಡ ಮಾಲಾಶ್ರೀ ಬಗ್ಗೆನೇ ಆಗಿತ್ತು. ಇದಕ್ಕೂ ಮುಂಚೆ ಮನೆಮಂದಿ ಎಲ್ಲ ಸೇರಿ ಮಾಳವಿಕಾ ಅವರನ್ನು ಮನೆಯ ಕ್ಯಾಪ್ಟನ್ ಆಗಿ ನೇಮಕ ಮಾಡಿದ್ದರು. ಈ ನೇಮಕದ ಬಳಿಕ ಬಿಗ್ಬಾಸ್ಮನೆಗೆ ಒಮ್ಮೆಲೇ ಎಂಟ್ರಿ ನೀಡಿದ ಮಾಲಾಶ್ರೀ ಎಲ್ಲರಿಗೂ ಶಾಕ್ ಕೊಟ್ಟರು.
ಮಾಲಾಶ್ರೀ ಮನೆಗೆ ಎಂಟ್ರಿ ಕೊಟ್ಟ ಮೇಲೆ ಓಂಪ್ರಕಾಶ್ಹಾಸ್ಯಭರಿತ ಮಾತುಗಳ ಮೂಲಕ ಎಲ್ಲ ಮನೆ ಸದಸ್ಯರ ಪರಿಚಯ ಮಾಡಿಕೊಟ್ಟರು. ನಂತರ ಕಿಚ್ಚ ಬಿಗ್ಬಾಸ್ಮನೆ ಟಿವಿಯಲ್ಲಿ ಪ್ರತ್ಯಕ್ಷವಾಗಿ ಮಾಲಶ್ರೀ ಕುರಿತು ಇತರ ಸದಸ್ಯರಿಗೆ ಕೆಲ ಪ್ರಶ್ನೆಗಳನ್ನ ಕೇಳಿದರು. ಈ ಸಂದರ್ಭದಲ್ಲಿ ಪ್ರಥಮ್, ಮನೆಯಲ್ಲಿ ಮಾಲಾಶ್ರೀಯವರಿಗೆ ಬೆಂಗಾವಲಾಗಿ ಇರುತ್ತೇನೆ ಎಂದು ಹೇಳಿದರು.
ಪ್ರಥಮ್ ಹಾಗು ಶಾಲಿನಿ ಮಧ್ಯೆ ನಡೆದ ತಿಕ್ಕಾಟ-ಕಾದಾಟದಿಂದ ಗೊಂದಲದ ಗೂಡಾಗಿದ್ದ ಬಿಗ್ಬಾಸ್ಮನೆ ಇದೀಗ ಮತ್ತೆ ರಂಗೇರಿದೆ. ಈಗ ಸ್ಪರ್ಧಿಗಳ ಮಧ್ಯೆ ಇನ್ನಷ್ಟು ತಿಕ್ಕಾಟ-ಕಾದಾಟ ನಡೆಯುವ ಸಾಧ್ಯತೆಗಳು ಹೆಚ್ಚಾಗಿದೆ.
ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಚೈತ್ರ ಹೇಳಿದ್ದು ಹೀಗೆ…..
ಇನ್ನೊಂದೆಡೆ ‘ಸೂಪರ್ಸಂಡೇ ವಿಥ್ಸುದೀಪ್’ ಕಾರ್ಯಕ್ರಮದಲ್ಲಿ ಕಿಚ್ಚನೊಂದಿಗೆ ಮಾತನಾಡಿದ ಬಿಗ್ಬಾಸ್ ಮನೆಯಿಂದ ಹೊರಬಂದಿರುವ ಚೈತ್ರ, ಬಿಗ್ಬಾಸ್ಮನೆಯಲ್ಲಿ ಗುಂಪುಗಾರಿಕೆ ನಡೆಯುತ್ತಿದೆ ಎಂದರು.
ಬಿಗ್ಬಾಸ್ ಮನೆ ಹೇಗಿತ್ತು ಅಂತ ಕೇಳಿದ ಸುದೀಪ್ಗೆ ಚೈತ್ರಾ ಹೇಳಿದ್ದು ‘ಈಗ ಆಟ ಶುರುವಾಗಿತ್ತು, ಆದ್ರೆ ಈವಾಗ್ಲೇ ಹೊರಬಂದೆ’ ಎಂದು ಹೇಳಿದರು. ಮನೆಯಲ್ಲಿ ಒಂದು ತೆರನಾದ ಗುಂಪುಗಾರಿಕೆ ನಡೆಯುತ್ತಿದೆ.ಅದರಲ್ಲೂ ಮಾಳವಿಕಾ, ನಿರಂಜನ್, ಕೀರ್ತಿ ಮತ್ತು ಇತರ ಒಂದಿಷ್ಟು ಸದಸ್ಯರು ಗುಂಪುಗಾರಿಕೆ ಮಾಡುತ್ತಿದ್ದಾರೆ ಎಂದು ಚೈತ್ರಾ ಕಿಚ್ಚನ ಮುಂದೆ ಅಭಿಪ್ರಾಯ ಮಂಡಿಸಿದರು.
Comments are closed.