ಮನೋರಂಜನೆ

ಇದೊಳ್ಳೆ ರಾಮಾಯಣ ಚಿತ್ರದಲ್ಲಿ ಐವರು ರಾಷ್ಟ್ರ ಪ್ರಶಸ್ತಿ ವಿಜೇತರು

Pinterest LinkedIn Tumblr

priyaಬೆಂಗಳೂರು: ಪ್ರಕಾಶ್ ರೈ ಅವರ ಇದೊಳ್ಳೆ ರಾಮಾಯಣ ಚಿತ್ರ ತೆರೆಮೇಲೆ ಬರಲು ಸರ್ವಸನ್ನದ್ಧವಾಗಿದೆ. ಹೆಸರಿನಿಂದಲೇ ಕುತೂಹಲ ಕೆರಳಿಸಿರುವ ಈ ಚಿತ್ರದಲ್ಲಿ ಐವರು ರಾಷ್ಟ್ರಪ್ರಶಸ್ತಿ ವಿಜೇತರಿರುವುದು ವಿಶೇಷ.

ನಟ, ನಿದೇರ್ಶಕ ಪ್ರಕಾಶ್ ರೈ, ನಟಿ ಪ್ರಿಯಾಮಣಿ, ಸಂಗೀತ ನಿರ್ದೇಶಕ ಇಳೆಯರಾಜ, ಸಂಕಲನಕಾರ ಶ್ರೀಕರ್ ಪ್ರಸಾದ ಹಾಗೂ ಕಲಾ ನಿರ್ದೇಶಕ ಶಶಿಧರ್ ಅಡಪ ರಾಷ್ಟ್ರ ಪ್ರಶಸ್ತಿ ವಿಜೇತರು. ಈ ಪಂಚ ತಾರೆಗಳ ಪ್ರಯತ್ನದ ಫಲವೇ ಇದೊಳ್ಳೆ ರಾಮಾಯಣ.

ಈ ಕುರಿತು ಪ್ರಕಾಶ್ ರೈ ಪ್ರತಿಕ್ರಿಯಿಸಿ, ಈ ಚಿತ್ರದಲ್ಲಿ ಹಲವು ರಾಷ್ಟ್ರಪ್ರಶಸ್ತಿ ವಿಜೇತರು ಕಾರ್ಯನಿರ್ವಹಿಸಿರುವದು ಸಂತಸದ ಸಂಗತಿ. ಇದು ಚಿತ್ರದ ಗುಣಮಟ್ಟವನ್ನು ಹೆಚ್ಚಿಸಿದೆ. ಇಳೆಯರಾಜ ಅವರ ಸಂಗೀತ ಕೇಳುತ್ತಿದ್ದರೆ ನಮ್ಮಲ್ಲಿನ ಭಾವನೆ ಹೊರಬರುತ್ತದೆ. ಅದೇ ರೀತಿ ಉಳಿದ ಕಲಾವಿದರು ತಮ್ಮತನವನ್ನು ಕಾಯ್ದುಕೊಂಡಿದ್ದಾರೆ ಎಂದು ತಿಳಿಸಿದರು.

Comments are closed.