ಮನೋರಂಜನೆ

ಪ್ರವಾಹದಿಂದಾಗಿ ಬೆಂಗಳೂರಿಗೆ ಆಗಮಿಸಿದ ಸುಹಾಸಿನಿ ಹಾಗೂ ಮಣಿರತ್ನಂ

Pinterest LinkedIn Tumblr

maff

ಚೆನ್ನೈನಲ್ಲಿ ಉಂಟಾಗಿರುವ ಪ್ರವಾಹ ಅಲ್ಲಿನ ಜನರ ಬದುಕನ್ನು ಮೂರಾಬಟ್ಟೆಯನ್ನಾಗಿಸಿದೆ. ಈಗಾಗಲೇ ಪ್ರವಾಹಕ್ಕೆ ಹೆದರಿ ಅನೇಕರು ಚೆನ್ನೈ ಬಿಟ್ಟು ಬೇರೆ ಬೇರೆ ಊರುಗಳಿಗೆ ಪ್ರಯಾಣ ಬೆಳೆಸಿದ್ದಾರೆ. ಇನ್ನು ಪ್ರವಾಹದ ಬಿಸಿ ಸಿನಿಮಾ ತಾರೆಯರನ್ನು ಬಿಟ್ಟಿಲ್ಲ.ಪ್ರವಾಹದಿಂದಾಗಿ ಮಣಿರತ್ನಂ ಹಾಗೂ ಸುಹಾಸಿನಿ ದಂಪತಿ ಇದೀಗ ಬೆಂಗಳೂರಿಗೆ ಶಿಫ್ಟ್ ಆಗಿದ್ದಾರೆ.

ಪ್ರವಾಹದಿಂದಾಗಿ ಚೆನ್ನೈನ ಚಿತ್ರಣ ಸಂಪೂರ್ಣವಾಗಿ ಬದಲಾಗಿ ಹೋಗಿದೆ. ಚೆನ್ನೈ ಮತ್ತೆ ಮೊದಲಿನಂತೆ ಆಗಲೂ ಇನ್ನೂ ಕೆಲವು ದಿನಗಳು ಬೇಕಾಗುತ್ತದೆ. ಹಾಗಾಗಿ ಅಷ್ಟರವರೆಗೆ ಚೆನ್ನೈನಲ್ಲಿ ಇರೋದು ಕಷ್ಟವಾದ್ದರಿಂದ ಸುಹಾಸಿನಿ ಹಾಗೂ ಮಣಿರತ್ನಂ ಅವರು ಬೆಂಗಳೂರಿಗೆ ಆಗಮಿಸಿದ್ದಾರೆ. ಅಲ್ಲದೇ ಬೆಂಗಳೂರಿನಲ್ಲಿ ತಮ್ಮ ಕೆಲ ಸ್ನೇಹಿತರ ಮನೆಗಳಿಗೆ ಭೇಟಿ ನೀಡುತ್ತಿದ್ದಾರೆ. ನಟ ಅಂಬರೀಶ್ ಅವರ ಮನೆಗೂ ಮಣಿರತ್ನಂ ದಂಪತಿ ಭೇಟಿ ನೀಡಿದ್ದಾರೆ.

ಇನ್ನು ಸುಹಾಸಿನಿ ಹಾಗೂ ಮಣಿರತ್ನಂ ಅವರು ತಮ್ಮ ಮನೆಗೆ ಭೇಟಿ ನೀಡಿರೋ ಫೋಟೋ ಒಂದನ್ನು ಸುಮಲತಾ ಅವರು ಟ್ವಿಟರ್ ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ಅಲ್ಲದೇ ಫೋಟೋದ ಬಗ್ಗೆ ಹೇಳಿರುವ ಅವರು ಚೆನ್ನೈನ ಮಳೆ ಕೆಲ ಸ್ನೇಹಿತರನ್ನು ಬೆಂಗಳೂರಿಗೆ ಬರುವಂತೆ ಮಾಡಿದೆ. ಚೆನ್ನೈ ಇನ್ನು ಕೆಲವೇ ದಿನಗಳಲ್ಲಿ ಮೊದಲಿನಂತಾಗುತ್ತೆ. ಮಹಾ ನಗರ ಕೆಲವೇ ದಿನಗಳಲ್ಲಿ ಸಹಜ ಸ್ಥಿತಿಯತ್ತ ಬರುತ್ತೆ ಅನ್ನೋ ನಂಬಿಕೆ ನನಗಿದೆ ಅಂತಾ ಅವರು ಹೇಳಿದ್ದಾರೆ.

Write A Comment