ಮನೋರಂಜನೆ

ವಿಲನ್ ಆಗಿ ಮಿಂಚಿದ್ದ ಸತ್ಯಪ್ರಕಾಶ್ ಮತ್ತೆ ಸ್ಯಾಂಡಲ್‍ವುಡ್‍ಗೆ ಎಂಟ್ರಿ

Pinterest LinkedIn Tumblr

sathyaprakash

ಬೆಂಗಳೂರು: ಪೊಲೀಸ್ ಸ್ಟೋರಿ ಚಿತ್ರದಲ್ಲಿ ಸಾಯಿಕುಮಾರ್ ಮುಂದೆ ಖಡಕ್ ವಿಲನ್ ಆಗಿ ಮಿಂಚಿದ ನಟ ಸತ್ಯಪ್ರಕಾಶ್, ಒಂದು ಗ್ಯಾಪ್‍ನ ನಂತರ ಗಿರ್‍ಗಿಟ್ಲೆ ಎನ್ನುವ ವಿಭಿನ್ನ ಟೈಟಲ್‍ನ ಹೊಸ ಪ್ರತಿಭೆಗಳ ಚಿತ್ರದೊಂದಿಗೆ ಸ್ಯಾಂಡಲ್‍ವುಡ್‍ಗೆ ಎಂಟ್ರಿ ಕೊಡುತ್ತಿದ್ದಾರೆ.

ಮಾಫಿಯಾ ಕಥೆ ಹೇಳಲು ಹೊರಟಿರುವ ಚಿತ್ರತಂಡಕ್ಕೆ ರವಿಕಿರಣ್ ಸಾರಥ್ಯವಹಿಸಿದ್ದಾರೆ. ಮೂವರು ಹೊಸ ಪ್ರತಿಭೆಗಳು ನಾಯಕರಾಗಿ ಕಾಣಿಸಲಿರುವ ಗಿರ್‍ಗಿಟ್ಲೆ ಚಿತ್ರದಲ್ಲಿ ಸಿನಿಯರ್ ಕಲಾವಿದರ ದಂಡೆ ಇದೆ. ರಂಗಾಯಣ ರಘು, ಸತ್ಯಪ್ರಕಾಶ್, ರಾಘವ್ ಉದಯ್, ಕೋಟೆ ಪ್ರಭಾಕರ್, ರಾಕ್‍ಲೈನ್ ಸುಧಾಕರ್ ಸೇರಿದಂತೆ ಹಲವು ಕಲಾವಿದರು ಅಭಿನಯಿಸಿದ್ದಾರೆ.

ಬೆಂಗಳೂರಿನ ಟಿಂಬರ್ ಫ್ಯಾಕ್ಟರಿಯಲ್ಲಿ ಸತ್ಯಪ್ರಕಾಶ್ ಅವರ ದೃಶ್ಯಗಳನ್ನು ಚಿತ್ರೀಕರಿಸಲಾಯಿತು. ಮಾತಿನ ಹಂತದ ಚಿತ್ರೀಕರಣ ಪೂರ್ತಿ ಮಾಡಿರುವ ಗಿರ್‍ಗಿಟ್ಲೆ ಉಳಿದ ಫೈಟ್ ಮತ್ತು ಹಾಡಿನ ಶೂಟಿಂಗ್ ಮುಗಿಸಿ ಥಿಯೇಟರ್ ಅಂಗಳಕ್ಕೆ ಎಂಟ್ರಿ ಕೊಡಲಿದೆ.

Write A Comment