ಕೆಲವೊಮ್ಮೆ ಅಭಿಮಾನಿಗಳ ಅಭಿಮಾನ ವಿಪರೀತ ಎನ್ನುವಷ್ಟು ವಿಚಿತ್ರವಾಗಿರುತ್ತದೆ. ಅದಕ್ಕೀಗ ಲೇಟೆಸ್ಟ್ ಉದಾಹರಣೆ ‘ಸೂಪರ್ ಸ್ಟಾರ್’ ರಜನಿಕಾಂತ್ ಫ್ಯಾನ್ಸ್! ತಮಿಳುನಾಡಿನಲ್ಲಿ ರಜನಿ ‘ಸೂಪರ್ ಸ್ಟಾರ್’ ಎಂದೇ ಫೇಮಸ್. ಅದೇ ಈಗ ವಿವಾದ ಸೃಷ್ಟಿಸಿದೆ. ಟಾಲಿವುಡ್ನಲ್ಲಿ ಮಹೇಶ್ ಬಾಬು ಅವರಿಗೂ ‘ಸೂಪರ್ ಸ್ಟಾರ್’ ಎಂಬ ವಿಶೇಷಣವಿದೆ.
ಮೊನ್ನೆಯಷ್ಟೇ ಮಹೇಶ್ ನಟನೆಯ ‘ಶ್ರೀಮಂತುಡು’ ಚಿತ್ರ ತೆರೆಕಂಡು ಸೂಪರ್ ಹಿಟ್ ಎನಿಸಿಕೊಂಡಿದೆ. ಅಲ್ಲದೆ, ತಮಿಳಿಗೂ ಈ ಚಿತ್ರ ಡಬ್ ಆಗಿ ‘ಸೆಲ್ವಂಧನ್’ ಹೆಸರಿನಲ್ಲಿ ಬಿಡುಗಡೆಯಾಗಿತ್ತು. ಕಿರಿಕ್ ಶುರುವಾಗಿದ್ದೇ ಅಲ್ಲಿ. ‘ಸೆಲ್ವಂಧನ್’ ಟೈಟಲ್ ಕಾರ್ಡ್ನಲ್ಲಿ ‘ಸೂಪರ್ ಸ್ಟಾರ್’ ಮಹೇಶ್ ಬಾಬು ಎಂದು ಮುದ್ರಿತವಾಗಿದೆ. ಇದು ರಜನಿ ಅಭಿಮಾನಿಗಳನ್ನು ಕೆರಳಿಸಿದೆ!!
‘ನಮಗೆಲ್ಲ ‘ಸೂಪರ್ ಸ್ಟಾರ್’ ಒಬ್ಬರೇ; ಅದು ರಜನಿಕಾಂತ್’ ಎಂದು ಆಕ್ಷೇಪ ವ್ಯಕ್ತಪಡಿಸಿದ್ದಾರಂತೆ ರಜನಿ ಫ್ಯಾನ್ಸ್. ಅಲ್ಲದೇ, ಕನಿಷ್ಠ ತಮಿಳು ಅವತರಣಿಕೆಯಲ್ಲಾದರೂ ಟೈಟಲ್ ಕಾರ್ಡ್ನಲ್ಲಿರುವ ‘ಸೂಪರ್ ಸ್ಟಾರ್’ ಎಂಬ ವಿಶೇಷಣ ಕಿತ್ತು ಹಾಕುವಂತೆ ಗಲಾಟೆ ಮಾಡುತ್ತಿದ್ದಾರೆ.
ಆದರೆ ಈ ಬಗ್ಗೆ ರಜನಿ ಆಗಲಿ, ಮಹೇಶ್ ಆಗಲಿ ತಲೆ ಕೆಡಿಸಿಕೊಂಡಿಲ್ಲ ಅಂತಲೇ ಅನ್ನಿ. ಅಂದ್ಹಾಗೆ, ‘ಶ್ರೀಮಂತುಡು’ ಮೂಲಕ ಯಶಸ್ಸು ನೀಡಿದ್ದಕ್ಕೆ ನಿರ್ದೇಶಕ ಕೊರಟಲ ಶಿವ ಅವರಿಗೆ 50 ಲಕ್ಷ ರೂ. ಮೌಲ್ಯದ ಆಡಿ ಕಾರ್ ಗಿಫ್ಟ್ ನೀಡಿದ್ದಾರೆ ಮಹೇಶ್ ಬಾಬು. ಹೀಗೆ ಸಂಭ್ರಮ ಪಡುತ್ತಿರುವ ಸಮಯದಲ್ಲಿ ಇಂಥ ಕಿರಿಕ್ಗಳಿಗೆ ಪ್ರತಿಕ್ರಿಯಿಸೋದಕ್ಕೆ ಅವರಿಗೆ ಸಮಯವಾದರೂ ಎಲ್ಲಿದೆ?