ಇಂದು ರಾಜ್ಯಾದ್ಯಂತ ಹಾಸ್ಯನಟ ಶರಣ್ ಅಭಿನಯದ ಹಾಸ್ಯಭರಿತ ಚಿತ್ರ ಬುಲೆಟ್ ಬಸ್ಯಾ ಸಿನಿಮಾ ತೆರೆ ಕಂಡಿದೆ.
ಮೊದಲ ದಿನವಾದ ಇಂದು ಬುಲೆಟ್ ಬಸ್ಯಾ ಸಿನಿಮಾ ತಂಡ ಆನಂದ್ ರಾವ್ ವೃತ್ತದ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿತು.
ಈ ವೇಳೆ ಗಣಪತಿ ದೇವಸ್ಥಾನದಿಂದ ಕಪಾಲಿ ಸಿನಿಮಾದವರೆಗೆ ನಾಯಕ ನಟ ಶರಣ್ ಹಾಗೂ ನಟಿ ಹರಿಪ್ರಿಯ ಜೊತೆ ಬುಲೆಟ್ ನಲ್ಲಿ ತೆರಳಿದರು.
ಜಯತೀರ್ಥ ನಿರ್ದೇಶನದಲ್ಲಿ ಮೂಡಿ ಬಂದಿರುವ ಬುಲೆಟ್ ಬಸ್ಯಾ ಚಿತ್ರ ಇಂದು ರಾಜ್ಯಾದ್ಯಂತ ನೂರಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಂಡಿದೆ. ಅರ್ಜುನ್ ಜನ್ಯಾರ ಸಂಗೀತ ಚಿತ್ರಕ್ಕಿದ್ದು, ಹಾಡುಗಳು ಈಗಾಗಲೇ ಸೂಪರ್ ಹಿಟ್ ಆಗಿವೆ.