ಮನೋರಂಜನೆ

ಸ್ಟಾರ್ ಗಳ ಸಫೋರ್ಟ್; ಬಾಹುಬಲಿಗೆ ಅಂಜದ ರಂಗಿತರಂಗ, ಗಣಪ

Pinterest LinkedIn Tumblr

Rangitarangaಕನ್ನಡ ಚಿತ್ರರಂಗದಲ್ಲಿ ಹೊಸಬರಿಗೆ ಪ್ರೋತ್ಸಾಹವಿಲ್ಲ, ಹೊಸಬರ ಚಿತ್ರಗಳನ್ನು ಯಾರೂ ನೋಡುವುದಿಲ್ಲ ಎಂಬಂತಹ ಮಾತುಗಳು ಆಗಾಗ ಕೇಳಿ ಬರುತ್ತಲೇ ಇರುತ್ತವೆ. ಅದಕ್ಕೆ ತಕ್ಕಂತೆ ಸ್ಟಾರ್‌ಗಳು ಹೊಸಬರ ಚಿತ್ರಗಳನ್ನು ನೋಡಿ ಪ್ರೋತ್ಸಾಹಿಸುವುದು, ಅದರ ಬಗ್ಗೆ ನಾಲ್ಕು ಮಾತಾಡುವುದು ಇವೆಲ್ಲಾ ಆಗಾಗ ನಡೆಯುತ್ತಿರುತ್ತದೆ. ಎರಡು ವರ್ಷಗಳ ಹಿಂದೆ ಬಿಡುಗಡೆಯಾದ “ಗೊಂಬೆಗಳ ಲವ್‌’ ಚಿತ್ರವನ್ನು ರವಿಚಂದ್ರನ್‌ ನೋಡುವುದರ ಜೊತೆಗೆ, ಚಿತ್ರದ ಬಗ್ಗೆ ಚಾನಲ್‌ಗ‌ಳಲ್ಲಿ ಕೂತು ಒಳ್ಳೆಯ ಮಾತುಗಳನ್ನಾಡಿದ್ದರು.

ಈಗ ಅಂಥದ್ದೇ ಮಾತುಗಳು “ರಂಗಿತರಂಗ’ ಚಿತ್ರತಂಡವೂ ಕೇಳುತ್ತಿದೆ. ಕಳೆದ ವಾರ ಬಿಡುಗಡೆಯಾದ “ರಂಗಿತರಂಗ’ ಚಿತ್ರಕ್ಕೆ ವಿಮರ್ಶಕರು ಮತ್ತು ಪ್ರೇಕ್ಷಕರು ಒಳ್ಳೆಯ ಮಾತುಗಳನ್ನಾಡಿದ್ದಾರೆ. ಚಿತ್ರ ಸಹ ಹೌಸ್‌ಫ‌ುಲ್‌ ಪ್ರದರ್ಶನವನ್ನು ಕಂಡಿದೆ. ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿರುವ ಪುನೀತ್‌ ರಾಜಕುಮಾರ್‌, ಚಿತ್ರ ನೋಡಿ ಮೆಚ್ಚುವುದರ ಜೊತೆಗೆ ಚಿತ್ರತಂಡದ ಬೆನ್ನು ತಟ್ಟಿದ್ದಾರೆ. ಪುನೀತ್‌ ಮಾತ್ರವಲ್ಲ, ನಟ-ನಿರ್ದೇಶಕ ರವಿಚಂದ್ರನ್‌ ಅವರು ಸಹ ಚಿತ್ರಕ್ಕೆ ಸಿಗುತ್ತಿರುವ ಪ್ರತಿಕ್ರಿಯೆಗಳನ್ನು ಕೇಳಿ ಚಿತ್ರವನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಎಲ್ಲಾ ಅಂದುಕೊಂಡಂತೆ ಆದರೆ, ಇನ್ನೊಂದೆರೆಡು ದಿನಗಳಲ್ಲಿ ರವಿಚಂದ್ರನ್‌ “ರಂಗಿತರಂಗ’ ಚಿತ್ರವನ್ನು ನೋಡಲಿದ್ದಾರೆ.

ಇದು ಬರೀ “ರಂಗಿತರಂಗ’ ಚಿತ್ರವೊಂದರ ವಿಚಾರವಷ್ಟೇ ಅಲ್ಲ, “ಗಣಪ’ ಚಿತ್ರದ ಬಗ್ಗೆಯೂ ಒಳ್ಳೆಯ ಮಾತುಗಳು ಕೇಳಿ ಬರುತ್ತಿವೆ. ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಚಿತ್ರದ ಬಗ್ಗೆ ಒಳ್ಳೆಯ ಮಾತುಗಳನ್ನು ಕೇಳಿರುವ ದರ್ಶನ್‌, “ಗಣಪ’ನನ್ನು ನೋಡುವ ಇಂಗಿತ ವ್ಯಕ್ತಪಡಿಸಿದ್ದಾರಂತೆ. ಹಾಗಾಗಿ ದರ್ಶನ್‌ ಅವರಿಗಾಗಿಯೇ ವಿಶೇಷ ಪ್ರದರ್ಶನವೊಂದನ್ನು ಹಾಕುವುದಕ್ಕೆ ಚಿತ್ರತಂಡ ತೀರ್ಮಾನಿಸಿದೆ. ಅದರಂತೆ ಬುಧವಾರ (ಜುಲೈ 15)ರಂದು ಚಿತ್ರತಂಡ ದರ್ಶನ್‌ಗಾಗಿಯೇ ವಿಶೇಷ ಪ್ರದರ್ಶನವೊಂದನ್ನು ಆಯೋಜಿಸಲಾಗಿದೆ.
-ಉದಯವಾಣಿ

Write A Comment