ರಕ್ತಚಂದನ ಕಳ್ಳಸಾಗಾಣಿಕೆ ಆರೋಪ ಎದುರಿಸುತ್ತಿರುವ ಚಿತ್ರನಟಿ ನೀತು ಅಗರ್ವಾಲ್ ಅವರು ತಮ್ಮ ಮೇಲೆ ಕಳ್ಳ ಸಾಗಾಣಿಕೆದಾರನೊಬ್ಬ ನನ್ನ ಮೇಲೆ ಹಲ್ಲೆ ನಡೆಸಿದ್ದಾನೆ ಎಂದು ದೂರು ದಾಖಲಿಸಿದ್ದು ಕುತೂಹಲಕ್ಕೆ ಕಾರಣವಾಗಿದೆ.
ರಕ್ತಚಂದನ ಕಳ್ಳ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿ ಜಾಮೀನು ಪಡೆದು ರುದ್ರಾವರಂ ಪೊಲೀಸ್ ಠಾಣೆಯಿಂದ ಮರಳುತ್ತಿರುವ ಸಮಯದಲ್ಲಿ ಸಿರಿವೆಲ್ಲಾ ಗ್ರಾಮದ ಬಳಿ ನಾಗರಾಜ್ ಎಂಬಾತ ನಮ್ಮ ವಾಹನವನ್ನು ತಡೆದು ನನ್ನ ಮತ್ತು ಕಾರಿನ ಚಾಲಕನ ಮೇಲೆ ಹಲ್ಲೆ ನಡೆಸಿ ಅಸಭ್ಯವಾಗಿ ವರ್ತಿಸಿದ್ದಾನೆ ಎಂದು ನೀತು ತಾನು ನೀಡಿರುವ ದೂರಿನಲ್ಲಿ ತಿಳಿಸಿದ್ದಾಳೆ.
ಈ ನಡುವೆ ಈ ಹಲ್ಲೆ ಆರೋಪಕ್ಕೆ ಒಳಗಾಗಿರುವ ನಾಗರಾಜು, ನೀತು ಮೇಲೆ ಯಾವುದೇ ಹಲ್ಲೆ ನಡೆಸಿಲ್ಲ. ನಂದ್ಯಾಳ ಜೈಲಿನಲ್ಲಿದ್ದಾಗ ತಾವು ಮಾಡಿದ ವೆಚ್ಚವನ್ನು ಹಿಂತಿರುಗಿಸುವಂತೆ ಕೇಳಿದ ಕಾರಣಕ್ಕೆ ಈ ರೀತಿ ಆರೋಪಿಸಿದ್ದಾಳೆ ಎಂದು ಪ್ರತಿ ದೂರು ದಾಖಲಿಸಿದ್ದಾನೆ ಎಂಬ ಮಾಹಿತಿ ಲಭಿಸಿದೆ.