ಮನೋರಂಜನೆ

ಸಮಾಜ ಸೇವೆಗೆ ಸುದೀಪ್ ಪ್ರೇರಣೆ

Pinterest LinkedIn Tumblr

just‘ಜಸ್ಟ್ ಮದ್ವೇಲಿ’ ಚಿತ್ರತಂಡ ಇತ್ತೀಚೆಗೆ ಸಮಾಜ ಸೇವೆ ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದೆ. ಸಿನಿಮಾ ಲೋಕದಲ್ಲಿ ಮುಳುಗಿದವರು ಅದರಿಂದ ಹೊರಬಂದು ವಿಕಲಚೇತನ ಮಕ್ಕಳಿಗೆ ಸಹಾಯ ಮಾಡಿದ್ದಾರೆ. ಇದಕ್ಕೆ ಸುದೀಪ್ ಪ್ರೇರಣೆ ಎನ್ನುತ್ತಾರೆ ನಿರ್ಮಾಪಕ ಮತ್ತು ನಟ ಹರೀಶ್.

ಚಂದ್ರ ಮೋಹನ್ ನಿರ್ದೇಶನದ ‘ಜಸ್ಟ್ ಮದ್ವೇಲಿ’ ಚಿತ್ರದ ಆಡಿಯೋ ರಿಲೀಸ್ ಸಮಯದಲ್ಲಿ ಚಿತ್ರತಂಡ ನಟ ಸುದೀಪ್‌ರಿಗೆ ಬೆಳ್ಳಿ ಕಿರೀಟವನ್ನು ಉಡುಗೊರೆಯಾಗಿ ನೀಡಲು ಬಯಸಿತ್ತು. ಅದರಂತೆ ಕಾರ್ಯಕ್ರಮಕ್ಕೆ ಬಂದ ಸುದೀಪ್‌ರಿಗೆ ಬೆಳ್ಳಿ ಕಿರೀಟವನ್ನು ತೊಡಿಸಿತು. ಆದರೆ, ಅದನ್ನು ಸುದೀಪ್ ತಿರಸ್ಕರಿಸಿದ್ದರು. ಅದರ ಬದಲು ಈ ಹಣವನ್ನು ಬಡವರಿಗೆ ದಾನ ಮಾಡಿ ಎಂದು ಸಲಹೆ ನೀಡಿದ್ದರು. ಇದೀಗ ಸುದೀಪ್ ಆಶಯದಂತೆಯೇ ಆ ಕಿರೀಟದಿಂದ ಹಣವನ್ನು ವಿಕಲಚೇತನ ಮಕ್ಕಳಿಗೆ ನೀಡಲಾಗಿದೆ.

ಇತ್ತೀಚೆಗೆ ಚಿತ್ರ ತಂಡ , ಕೃಷ್ಣ ಚೈತನ್ಯ ಶಾಲೆಯವರಿಗೆ ಚೆಕ್ಕನ್ನು ವಿತರಿಸಿತು. ‘ಸುದೀಪ್ ಅವರು ಹೇಳಿದ್ದನ್ನು ಪಾಲಿಸಿದ್ದೇನೆ. ಈ ಮೂಲಕ ಅಗತ್ಯ ಇರುವವರಿಗೆ ಸಹಾಯ ಮಾಡಿದ ತೃಪ್ತಿಯೂ ನಮಗೆ ಸಿಕ್ಕಿದೆ’ ಎಂದು ಹರೀಶ್ ಹೇಳಿದ್ದಾರೆ.

ಹರೀಶ್ ತಾವೇ ನಿರ್ಮಾಣ ಮಾಡಿರುವ ಚಿತ್ರದಲ್ಲಿ ನಾಯಕರಾಗಿ ನಟಿಸುತ್ತಿದ್ದಾರೆ. ವಿಡಿಯೋಗ್ರಾಫರ್ ಆಗಿ ಚಿತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಭಜರಂಗಿ ಚಿತ್ರದಲ್ಲಿ ಖಳನಾಯಕರಾಗಿ ಅಬ್ಬರಿಸಿದ್ದ ಲೋಕಿ, ಈ ಚಿತ್ರದಲ್ಲೂ ಅಂಥದ್ದೇ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರದಲ್ಲಿ ದೀಪಾ ಮತ್ತು ಗಾಯತ್ರಿ ನಾಯಕಿಯರಾಗಿ ನಟಿಸಿದ್ದಾರೆ.

Write A Comment