ಮುಂಬೈ

ನಾನು ಬಾಯ್ಬಿಟ್ಟರೆ ಇಡೀ ದೇಶ ಅಲ್ಲಾಡಿ ಹೋಗುತ್ತೆ: ಬಾಂಬ್ ಸಿಡಿಸಿದ ಬಿಜೆಪಿ ಹಿರಿಯ ನಾಯಕ ಏಕ್‌ನಾಥ್ ಖಡಸೆ

Pinterest LinkedIn Tumblr

yeknaath

ಮುಂಬೈ: ನಾನು ಬಾಯಿ ತೆರೆದರೆ ಇಡೀ ದೇಶ ಅಲ್ಲಾಡಿ ಹೊದೀತು…’ ಕಳೆದ ಒಂದು ತಿಂಗಳ ಹಿಂದೆ ಕುಟುಕು ಕಾರ್ಯಾಚರಣೆಯ ಹಿನ್ನೆಲೆಯಲ್ಲಿ ತಲೆದಂಡ ತೆತ್ತಿದ್ದ ಮಹಾರಾಷ್ಟ್ರದ ಮಾಜಿ ಸಚಿವ ಮತ್ತು ಬಿಜೆಪಿ ಹಿರಿಯ ನಾಯಕ ಏಕ್‌ನಾಥ್ ಖಡಸೆ ಇಂದು ಇಂಥದೊಂದು ಬಾಂಬ್ ಸಿಡಿಸಿದ್ದಾರೆ.

ತಮ್ಮ ಕ್ಷೇತ್ರ ಜಲಗಾಂವ್‌ನ ಜನತೆ ಏರ್ಪಡಿಸಿದ್ದ ಸಮಾರಂಭವೊಂದರಲ್ಲಿ ಮಾತನಾಡಿದ ಏಕನಾಥ್ ಖಡಸೆ, ನನ್ನ ವಿರುದ್ದದ ಕುಟುಕು ಕಾರ್ಯಾಚರಣೆಯಿಂದ ಸೃಷ್ಟಿಯಾದ ಆರೋಪದಲ್ಲಿ ನಾನು ನನ್ನ ಸಚಿವ ಸ್ಥಾನಕ್ಕೆ ಇಂದು ರಾಜೀನಾಮೆ ಕೊಟ್ಟಿರಬಹುದು. ಆದರೆ ನಾನು ಬಾಯಿಬಿಟ್ಟರೆ(ನಿಜಸಂಗತಿ) ಇಡೀ ದೇಶ ತತ್ತರಿಸಿ ಹೋಗಲಿದೆ ಎಂದು ಹೇಳಿದರು.

ವಿಧಾನಸಭಾ ಚುನಾವಣಾ ಪೂರ್ವ ಬಿಜೆಪಿ ಶಿವಸೇನೆ ಮೈತ್ರಿ ಮುರಿದು ಬೀಳಲು ಕಾರಣ ನಾನೇ. ಒಂದು ವೇಳೆ ಆ ಸಂದರ್ಭ ನಾನು ಅಂಥ ಗಟ್ಟಿ ನಿರ್ಧಾರ ತೆಗೆದುಕೊಳ್ಳಲು ಹಿಂದೇಟು ಹಾಕಿದ್ದರೆ ಇಂದು ಮಹಾರಾಷ್ಟ್ರದಲ್ಲಿ ಶಿವಸೇನೆಯ ಮುಖ್ಯಮಂತ್ರಿ ಇರುತ್ತಿದ್ದರು. ನನ್ನಿಂದಾಗಿ ರಾಜ್ಯದಲ್ಲಿಂದು ಮುಖ್ಯ ಅಭ್ಯರ್ಥಿಯಾಗಿದ್ದಾನೆ ಎಂದು ಹೇಳಿದ ಅವರು, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರ ವಿರುದ್ದ ತೀವ್ರ ವಾಗ್ದಾಳಿ ನಡೆಸಿದರು. ಪಾಕಿಸ್ತಾನದಲ್ಲಿ ವಾಸ್ತವ್ಯವಿರುವ ಭೂಗತ ಪಾತಕಿ ದಾವೂದ್ ಇಬ್ರಾಹಿಂನ ಸ್ಥಿರ ದೂರವಾಣಿ ಸಂಖ್ಯೆಯನ್ನು ಹೊಂದಿದ್ದ ಆರೋಪವೂ ಸೇರಿದಂತೆ ಹಲವು ಆರೋಪಗಳ ಕಾರಣದಿಂದಾಗಿ ಕಂದಾಯ ಸಹಿತ ಕೆಲ ಪ್ರಮುಖ ಖಾತೆಗಳನ್ನು ಹೊಂದಿದ್ದ ಖಡಸೆ, ಇತ್ತೀಚೆಗೆ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿ ಹೊರಬಂದಿದ್ದರು.

Comments are closed.