ವಿಜಯಪುರ: ಶಾಖೆಯಲ್ಲಿ ನೀಲಿಚಿತ್ರ ನೋಡೋದು ಕಲಿಸುತ್ತಾರೆ ಎಂದು ಆರ್.ಎಸ್.ಎಸ್ ಮತ್ತು ಬಿಜೆಪಿ ವಿರುದ್ಧ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ವಿವಾದಾತ್ಮಕವಾಗಿ ಹೇಳಿಕೆ ನೀಡಿದ್ದಾರೆ.
ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಬಗ್ಗೆ ಆರೋಪ ಮಾಡಿರುವ ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ಆರ್.ಎಸ್.ಎಸ್ ಶಾಖೆಗೆ ಬರಲಿ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಆರ್.ಎಸ್.ಎಸ್ ಶಾಖೆಯಲ್ಲಿ ಕಲಿಸೋದು ನೀಲಿಚಿತ್ರ ನೋಡೋದಲ್ವೇ. ಆರ್ ಎಸ್ ಎಸ್ ಶಾಖೆಯಲ್ಲಿ ಕಲಿತವರು ವಿಧಾನಸಭೆಯಲ್ಲಿ ಮಾಡಿದ್ದೇನು…? ಕಲಾಪ ನಡೆಯುವಾಗ ನೀಲಿ ಚಿತ್ರ ನೋಡೋದು..? ಇದನ್ನ ಕಲಿಯಲು ಆರ್ ಎಸ್ ಎಸ್ ಶಾಖೆಗೆ ಹೋಗಬೇಕಾ..? ಅಲ್ಲಿಗೆ ಹೋಗಿ ಬಂದವರು ಏನು ಮಾಡಿದ್ದಾರೆಂದು ಗೊತ್ತಿದೆ. ಅಯ್ಯೋ ನನಗೆ ದಯವಿಟ್ಟು ಆರ್.ಎಸ್.ಎಸ್. ಶಾಖೆ ಸಹವಾಸವೇ ಬೇಡವೇ ಬೇಡ. ಬಡವರ ಶಾಖೆಯಲ್ಲಿ ಕಲಿತಿದ್ದೇ ನನಗೆ ಸಾಕು ಎಂದಿದ್ದಾರೆ.
ಆರ್.ಎಸ್.ಎಸ್. ಶಾಖೆಯಿಂದ ಕಲಿಸಿದ್ದನ್ನು ನೋಡಿದ್ದೇವೆ. ವಿಧಾನಸೌಧದಲ್ಲಿ ಯಾವ ರೀತಿ ನಡೆದುಕೊಳ್ಳಬೇಕು? ವಿಧಾನಸಭೆಯಲ್ಲಿ ಹೇಗಿರಬೇಕು ಎಂಬುದನ್ನು ಕಲಿಸಿದ್ದನ್ನು ಎಲ್ಲರೂ ನೋಡಿಲ್ಲವೇ? ವಿಧಾನಸಭೆ ಕಲಾಪ ನಡೆಯುತ್ತಿದ್ದರೆ ನೀಲಿ ಚಿತ್ರ ನೋಡಿಕೊಂಡು ಕುಳಿತುಕೊಳ್ಳುವುದು. ಇಂಥದ್ದನ್ನೆ ಅಲ್ಲವೇ ಅವರ ಶಾಖೆಯಲ್ಲಿ ಕಲಿಸುವುದು ? ಅದನ್ನು ಕಲಿತುಕೊಳ್ಳಲು ನಾನು ಆರ್.ಎಸ್.ಎಸ್. ಶಾಖೆಗೆ ಹೋಗಲೇ ಎಂದು ಗಂಭೀರ ಆರೋಪ ಮಾಡಿದ್ದಾರೆ.
Comments are closed.