ಕರ್ನಾಟಕ

ಅಧಿಕಗೊಳ್ಳುತ್ತಿರುವ ಕೊರೋನಾ ಹಿನ್ನೆಲೆ ಶಾಲೆ ಆರಂಭಕ್ಕೆ ಪೋಷಕರ ವಿರೋಧ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಕೊರೋನಾ ಪ್ರಕರಣಗಳು ಅಧಿಕಗೊಳ್ಳುತ್ತಿರುವ ಕಾರಣ ಶಾಲೆ ಆರಂಭಕ್ಕೆ ಸರ್ಕಾರ ಮುಂದಾಗಬಾರದೆಂದು ಪೋಷಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.

ಪ್ರತಿನಿತ್ಯ ಬಿಡುಗಡೆಗೊಳ್ಳುವ ಅಂಕಿಅಂಶಗಳ ಪ್ರಕಾರ ರಾಜ್ಯದಲ್ಲಿ ಕೋವಿಡ್‌ ಪ್ರಕರಣಗಳ ಸಂಖ್ಯೆಯಲ್ಲಿ ತೀವ್ರ ಹೆಚ್ಚಳವಾಗುತ್ತಿದೆ. ಇಂತಹ ಸಂದರ್ಭದಲ್ಲಿ ಶಾಲೆ ಆರಂಭ ಮಾಡಿದರೆ ಸಮಸ್ಯೆ ಬಿಗಡಾಯಿಸುತ್ತದೆ ಎಂಬುವುದು ಪೋಷಕರ ಆತಂಕವಾಗಿದೆ.

ಕೆಲವು ತಜ್ಞರು ಶಾಲೆ ಆರಂಭಿಸಬಹುದು ಎಂದು ಸರ್ಕಾರಕ್ಕೆ ತಿಳಿಸಿದರೂ ಇನ್ನೂ ಅಧಿಕೃತ ತೀರ್ಮಾನವನ್ನು ಸರ್ಕಾರ ಕೈಗೊಂಡಿಲ್ಲ. ಹೀಗಿದ್ದರೂ ಶಾಲೆ ಆರಂಭಿಸುವ ಕುರಿತಾಗಿ ಭಿನ್ನ ಅಭಿಪ್ರಾಯಗಳು ವ್ಯಕ್ತವಾಗುತ್ತಿದೆ.

ಇನ್ನು ರಾಜ್ಯ ಮಕ್ಕಳ ಆಯೋಗ ಶಾಲೆಗಳನ್ನು ಆರಂಭಿಸಿ ಹಾಗೂ ಪರೀಕ್ಷಾ ರಹಿತ ವರ್ಷವನ್ನಾಗಿ ಘೋಷಿಸಿ ಎಂದು ಸರ್ಕಾರಕ್ಕೆ ಶಿಫಾರಸು ಮಾಡಿದೆ. ಪ್ರಾಥಮಿಕ ಶಾಲೆಯ ಮಕ್ಕಳಲ್ಲಿ ರೋಗನಿರೋಧಕ ಶಕ್ತಿ ಹೆಚ್ಚಾಗಿರುವುದರಿಂದ ಶಾಲೆಯನ್ನು ತೆರೆಯುವುದರಲ್ಲಿ ಯಾವುದೇ ಸಮಸ್ಯೆ ಉಂಟಾಗುವುದಿಲ್ಲ ಎಂದು ಹೇಳಿದೆ.

ಆದರೆ ಮಕ್ಕಳಿಂದ ಮನೆಯ ಹಿರಿಯರಿಗೆ ಕೋವಿಡ್ ಹರಡುವ ಸಾಧ್ಯತೆಯನ್ನು ಅಲ್ಲಗಳೆಯುವ ಹಾಗಿಲ್ಲ. ಜೊತೆಗೆ ಹಿರಿಯ ವಯಸ್ಸಿನ ಶಿಕ್ಷಕರು ಇದರಿಂದ ಸಮಸ್ಯೆ ಅನುಭವಿಸುವ ಸಾಧ್ಯತೆ ಇದೆ ಎಂಬುವುದು ಕೆಲವು ಪೋಷಕರ ಅಭಿಪ್ರಾಯವಾಗಿದೆ. ಮಕ್ಕಳ ಮೂಲಕ ಕೋವಿಡ್ ಮನೆಯ ಹಿರಿಯರಿಗೆ ಹರಡಿದನ್ನು ಹೇಗೆ ನಿಯಂತ್ರಣ ಮಾಡಲು ಸಾಧ್ಯ ಎಂದು ಹಲವರು ಪ್ರಶ್ನಿಸಿದ್ದಾರೆ.

ಕೆಲವೊಂದು ವಾಸ್ತವ ಸಮಸ್ಯೆಗಳು ಇರುವುದರಿಂದ ಸದ್ಯ ಶಾಲೆಗಳನ್ನು ಆರಂಭಿಸುವುದು ಬೇಡ ಎಂಬ ಅಭಿಪ್ರಾಯವನ್ನು ಅವರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಸದ್ಯ ಶಾಲೆ ಆರಂಭ ಮಾಡುವುದು ಬೇಡ ಎಂಬುವುದು ಪೋಷಕರ ಅಭಿಪ್ರಾಯವಾಗಿದೆ.

Comments are closed.