ಕರ್ನಾಟಕ

ಮದ್ಯ ಸೇವೆನೆಗೆ ಹಣ ಕೊಡಲಿಲ್ಲವೆಂದು ಅಜ್ಜಿಯನ್ನು ಹತ್ಯೆ ಮಾಡಿದ ಮೊಮ್ಮಗ

Pinterest LinkedIn Tumblr


ಶಿವಮೊಗ್ಗ(ಜುಲೈ.08): ಮದ್ಯ ಸೇವೆನೆಗೆ ಹಣ ಕೊಡಲಿಲ್ಲ ಎಂದು ಅಜ್ಜಿಯನ್ನು ಕೊಂದು, ಇನ್ನೊಬ್ಬ ಅಜ್ಜಿಗೆ ಗಂಭೀರ ಗಾಯ ಮಾಡಿದ ಮೊಮ್ಮಗ. ನಿಜಕ್ಕೂ ಇಂತಹ ಮೊಮ್ಮಗ ಬೇಕಾ ಎಂದು ಯೋಚನೆ ಮಾಡುವಂತ ಘಟನೆ ಇದು. ಮದ್ಯ ಸೇವಿಸಲು ಹಣ ನೀಡಲಿಲ್ಲ ಎಂದು ಸ್ವತಃ ಅಜ್ಜಿಯನ್ನೇ ಕುಡುಗೋಲಿನಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಮೊಮ್ಮಗ. ಇನ್ನೊಬ್ಬರು ಸಂಬಂಧಿಕರ ಅಜ್ಜಿ ಸಾವು ಬದುಕಿನ ನಡುವೆ ಆಸ್ಪತ್ರೆಯಲ್ಲಿ ಹೋರಾಟ ನಡೆಸುತ್ತಿದ್ದಾರೆ. ಇಂತಹ ಒಂದು ಅಮಾನುಷ ಘಟನೆ ಭದ್ರಾವತಿಯ ತಾಷ್ಕೆಂಟ್ ನಗರದಲ್ಲಿ ನಡೆದಿದೆ.

ಭದ್ರಾವತಿಯಲ್ಲಿ ಇಂತಹ ಒಬ್ಬ ಪಾಪಿ ಮೊಮ್ಮಗನ ದುಕೃತ್ಯಕ್ಕೆ ಅಜ್ಜಿಯೊಬ್ಬರು ಸಾವನ್ನಪ್ಪಿದ್ದಾರೆ. ಅರುಣ್ ಕುಮಾರ್ 28 ವರ್ಷದ ಮೊಮ್ಮಗ ಕುಡಿತದ ಚಟಕ್ಕೆ ಬಿದ್ದಿದ್ದ. ಅಜ್ಜಿ ಎಷ್ಟೇ ಹೇಳಿದರೂ, ಮದ್ಯ ಸೇವನೆ ಬಿಟ್ಟಿರಲ್ಲಿಲ್ಲ. ಅಲ್ಲದೇ ಅಜ್ಜಿಯಿಂದಲೇ ಹಣವನ್ನು ಕಸಿದುಕೊಂಡು ಹೋಗಿ ಮದ್ಯ ಸೇವನೆ ಮಾಡುತ್ತಿದ್ದು. ಅದರೆ ಇಂದು ಅಜ್ಜಿ ಮದ್ಯ ಸೇವನೆಗೆ ಹಣ ನೀಡಿಲ್ಲ. ಈ ವೇಳೆ ಅರುಣ್ ಕುಮಾರ್ ಏಕಾಏಕಿ ಅವನ ಅಜ್ಜಿ ಸುಮಾರು 75 ವರ್ಷ ವಯಸ್ಸಿನ ಕಿಟ್ಟಮ್ಮ ಮೇಲೆ ಕುಡುಗೋಲಿನಿಂದ ಹಲ್ಲೆ ಮಾಡಿದ್ದಾನೆ.

ಕುತ್ತಿಗೆ ಭಾಗಕ್ಕೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ಅಜ್ಜಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಪಕ್ಕನ ಮನೆಯ ಸಂಬಂಧಿಕರ ಅಜ್ಜಿ ಪಾಪಮ್ಮ ಗಲಾಟೆ ಬಿಡಿಸಲು ಬಂದ ಸಮಯದಲ್ಲಿ ಆ ಅಜ್ಜಿಯ ಮೇಲು ಕಬ್ಬಿಣ ರಾಡಿನಿಂದ ಹಲ್ಲೆ ಮಾಡಿದ್ದಾನೆ. ಅಜ್ಜಿ ಗಂಬೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾವು ಬದುಕಿನ ನಡುವೆ ಹೋರಾಟ ನಡೆಸುತ್ತಿದೆ. ಅಜ್ಜಿ ಕಿಟ್ಟಮ್ಮ ಮೊಮ್ಮಗ ಅರುಣ್ ಕುಮಾರ್ ಕುಡಿದು ಹಾಳಾಗುತ್ತಾನೆ ಎಂಬ ಕಾರಣಕ್ಕೆ ಹಣ ಕೊಡಲು ನಿರಾಕರಿಸಿದೆ ವೇಳೆ ಅರುಣ್ ಇಂತಹ ಕೃತ್ಯ ಎಸಗಿದ್ದಾನೆ.

ಘಟನೆ ನಡೆದ ಬಳಿಕ ತಪ್ಪಿಸಿಕೊಳ್ಳಲು ಯತ್ನ ಮಾಡಿದ ಅರುಣ್ ಕುಮಾರ್ ನನ್ನು ಸ್ಥಳೀಯ ಹಿಡಿದು ಧರ್ಮದೇಟು ನೀಡಿದ್ದಾರೆ. ಕೈ ಕಾಲು ಕಟ್ಟಿಹಾಕಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಭದ್ರಾವತಿಯ ಶಿವಾಜಿನಗರದ ಹೊಸಮನೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅರುಣ್ ಕುಮಾರ್ ನನ್ನು ಪೊಲೀಸರು ಬಂಧಿಸಿದ್ದಾರೆ. ಸಾಕಿ ಸಲುಹಿದ ಅಜ್ಜಿಯನ್ನೇ ಕೊಂದ ಮೊಮ್ಮಗನಿಗೆ ಭದ್ರಾವತಿಯ ಜನತೆ ಹಿಡಿ ಶಾಪ ಹಾಕುತ್ತಿದೆ. ಶಿವಮೊಗ್ಗ.

Comments are closed.