ಕರ್ನಾಟಕ

ರಾಜ್ಯದಲ್ಲಿ ಭಾನುವಾರದ ಲಾಕ್‌ಡೌನ್‌ ತೆರವುಗೊಳಿಸಿದ ಮುಖ್ಯಮಂತ್ರಿ ಯಡಿಯೂರಪ್ಪ

Pinterest LinkedIn Tumblr


ಬೆಂಗಳೂರು: ರಾಜ್ಯದಲ್ಲಿ ಲಾಕ್‌ಡೌನ್‌ ತೆರವುಗೊಳಿಸಿದ ಬಳಿಕ ಪ್ರತಿ ಭಾನುವಾರ ಜಾರಿಗೊಳಿಸಲಾಗಿದ್ದು ಕಂಪ್ಲೀಟ್‌ ಲಾಕ್‌ಡೌನ್‌ಅನ್ನು ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ತೆರವುಗೊಳಿಸಿದ್ದಾರೆ. ಸಾರ್ವಜನಿಕರ ಬೇಡಿಕೆ ಹಿನ್ನೆಲೆಯಲ್ಲಿ ಹಾಗೂ ರಾಜ್ಯದ ಜನತೆಯ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ತಿಳಿಸಿದ್ದಾರೆ.

‘ಭಾನುವಾರ ದಿನಾಂಕ 31.05.2020ರಂದು ಕಂಪ್ಲೀಟ್‌ ಲಾಕ್‌ಡೌನ್ ಇರುವುದಿಲ್ಲ. ಆದ್ದರಿಂದ ಎಲ್ಲಾ ದೈನಂದಿನ ಚಟುವಟಿಕೆಗಳು ಎಂದಿನಂತೆ ಇರುತ್ತವೆ’ ಎಂದು ಸಿಎಂ ಬಿಎಸ್‌ ಯಡಿಯೂರಪ್ಪ ತಿಳಿಸಿದ್ದಾರೆ.

ಭಾನವಾರ ಕಂಪ್ಲೀಟ್‌ ಲಾಕ್‌ಡೌನ್‌ ಜಾರಿಯಲ್ಲಿದ್ದುದರಿಂದ ಶನಿವಾರ ಸಂಜೆ 7 ಗಂಟೆಯಿಂದ ಆರಂಭಗೊಂಡು ಸೋಮವಾರ ಬೆಳಗ್ಗೆ 7 ಗಂಟೆಯ ವರೆಗೆ ಕಂಪ್ಲೀಟ್‌ ಲಾಕ್‌ಡೌನ್‌ ಸ್ಥಿತಿ ನಿರ್ಮಾಣವಾಗಿತ್ತು. ಇದೀಗ ಭಾನುವಾರದ ಲಾಕ್‌ಡೌನ್‌ ತೆರವುಗೊಳಿಸಿರುವುದರಿಂದ ಎಂದಿನಂತೆ ಶನಿವಾರ ಸಂಜೆ 7ರ ನಂತರ ನಿಷೇಧವಿರುತ್ತದೆ. ಹಾಗೆಯೇ ಭಾನುವಾರ ಸಂಜೆ 7 ಗಂಟೆಯ ನಂತರ ಓಡಾಟಕ್ಕೆ ನಿರ್ಬಂಧವಿರುತ್ತದೆ. ಒಟ್ಟಿನಲ್ಲಿ ವಾರಪೂರ್ತಿ ಸಂಜೆ 7ರ ನಂತರ ಸಂಚಾರಕ್ಕೆ ನಿಷೇಧವಿರುತ್ತದೆ.

ಭಾನುವಾರ ರಜಾ ದಿನವಾದ ಕಾರಣ ಜನರ ಓಡಾಟ ವಿಪರೀತಕ್ಕೆ ಏರಬಹುದು ಎಂಬ ಕಾರಣಕ್ಕೆ ಭಾನುವಾರ ಕಂಪ್ಲೀಟ್‌ ಲಾಕ್‌ಡೌನ್‌ ಹೇರುವ ನಿರ್ಧಾರ ಕೈಗೊಳ್ಳಲಾಗಿತ್ತು.

Comments are closed.