ಕರ್ನಾಟಕ

ತರಕಾರಿ ತರಲು ಸೈಕಲ್ ಮೇಲೆ ಬಂದ ನಟ ನೀನಾಸಂ ಸತೀಶ್

Pinterest LinkedIn Tumblr


ಬೆಂಗಳೂರು: ಕೊರೊನಾ ಭೀತಿಯಿಮದಾಗಿ ದೇಶಾದ್ಯಂತ 21ದಿನಗಳ ಕಾಲ ದೇಶದೆಲ್ಲೆಡೆ ಲಾಕ್‍ಡೌನ್ ಘೋಷಿಸಲಾಗಿದ್ದು, ನಟ, ನಟಿಯರು ಸಹ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ನಟ ನಿನಾಸಂ ಸತೀಶ್ ಸಹ ಸ್ವಯಂ ದಿಗ್ಬಂಧನ ವಿಧಿಸಿಕೊಂಡಿದ್ದಾರೆ. ಆದರೆ ತರಕಾರಿ ಖರೀದಿಸಲು ಸೈಕಲ್ ಮೇಲೆ ಬಂದಿದ್ದಾರೆ.

ನೀನಾಸಂ ಸತೀಶ್ ಸದ್ಯ ರಾಜರಾಜೇಶ್ವರಿ ನಗರದಲ್ಲಿದ್ದು, ಅಲ್ಲಿಯೇ ಅಂಗಡಿಗಳಿಗೆ ಹೋಗಿ ಮನೆಗೆ ಬೇಕಾದ ತರಕಾರಿ ಖರೀದಿಸಿದ್ದಾರೆ. ಈ ವಿಡಿಯೋವನ್ನು ಅವರ ಇನ್‍ಸ್ಟಾಗ್ರಾಮ್ ನಲ್ಲಿ ಹಂಚಿಕೊಂಡಿದ್ದು, ಆರ್‍ಆರ್ ನಗರ ತುಂಬಾ ಶಾಂತವಾಗಿದೆ. ಯಾರೂ ಅನಾವಶ್ಯಕವಾಗಿ ಹೊರಗಡೆ ಬರುತ್ತಿಲ್ಲ. ಇಲ್ಲಿನ ಜನ ತುಂಬಾ ಸೆನ್ಸಿಬಲ್ ಆಗಿದ್ದಾರೆ ಎಂದು ಹೇಳಿದ್ದಾರೆ.

ದೇಶವೇ ಸ್ತಬ್ಧವಾಗಿರುವ ಸಂದರ್ಭದಲ್ಲಿ ಜನತೆ ಶಾಂತ ರೀತಿಯಿಂದ ವರ್ತಿಸಬೇಕು. ಒಮ್ಮೆಲೆ ಎಲ್ಲರೂ ಬಂದು ಅಂಗಡಿಗೆ ಮುತ್ತಿಕೊಳ್ಳಬಾರದು. ಒಬ್ಬೊಬ್ಬರೆ ಬಂದು ಅಗತ್ಯ ವಸ್ತುಗಳನ್ನು ಕೊಂಡುಕೊಳ್ಳಿ. ಹೆಚ್ಚು ಜನ ರೋಡಿಗೆ ಇಳಿದಿಲ್ಲ ಇದಕ್ಕಾಗಿ ಜನತೆಗೆ ಥ್ಯಾಂಕ್ಸ್ ಹೇಳಲೇಬೇಕು. ವಿವಿಧ ಭಾಗಗಳಲ್ಲಿ ತುಂಬಾ ಜನ ಪೊಲೀಸರೊಂದಿಗೆ ಗಲಾಟೆ ಮಾಡುತ್ತಿರುವುದನ್ನು ಕಂಡಿದ್ದೇವೆ. ಆದರೆ ಆರ್‍ಆರ್ ನಗರ ತುಂಬಾ ಶಾಂತವಾಗಿದೆ. ಹೀಗೆ ಒಬ್ಬರಾಗೇ ಬಂದು ಅಗತ್ಯ ವಸ್ತುಗಳನ್ನು ಖರೀದಿಸಿ ಇತರರಿಗೆ ಸಹಕರಿಸಿ. ಇಲ್ಲಿನ ಜನ ತುಂಬಾ ಸಹಕರಿಸುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ನಿಮ್ಮ ಏರಿಯಾಗಳಲ್ಲಿಯೂ ಸಹ ಇದೇ ರೀತಿ ವರ್ತಿಸಿ, ಆದಷ್ಟು ಪೊಲೀಸರಿಗೆ ಬೆಂಬಲ ನೀಡಿ, ಎಲ್ಲೆಲ್ಲಿ ಇದ್ದೀರೋ ಅಲ್ಲೇ ಇರಲು ಪ್ರಯತ್ನಿಸಿ, ನಾನು ಸಹ ಮನೆಯಲ್ಲೇ ಇದ್ದೇನೆ. ಎಲ್ಲಿಯವರೆಗೂ ಲಾಕ್‍ಡೌನ್ ಜಾರಿಯಲ್ಲಿರುತ್ತೋ ಅಲ್ಲಿಯವರೆಗೂ ಮನೆಯಲ್ಲೇ ಇರುತ್ತೇನೆ. ನೀವೂ ಎಲ್ಲರೂ ಮನೆಯಲ್ಲೇ ಇರಿ, ನೀವೆಲ್ಲ ಚೆನ್ನಾಗಿದ್ದರೆ, ಮುಂದೆ ಅದ್ಭುತವಾದ ಜೀವನ ನಡೆಸಬಹುದು. ತರಕಾರಿಯನ್ನು ಎಷ್ಟು ಬೇಕೋ ಅಷ್ಟೇ ತೆಗೆದುಕೊಳ್ಳಿ. ಅಷ್ಟೊಂದು ಜನರಿಲ್ಲ, ಎಲ್ಲ ಕಡೆಗಳಲ್ಲಿ ಅಗತ್ಯ ವಸ್ತುಗಳ ಅಂಗಡಿಗಳು ತೆರೆದಿವೆ. ಕೆಲವರು ಭಯಭೀತರಾಗಿ ಅಗತ್ಯಕ್ಕಿಂತ ಹೆಚ್ಚು ಕೊಳ್ಳುತ್ತಿದ್ದಾರೆ. ಆ ರೀತಿ ಮಾಡಬೇಡಿ. ಅಲ್ಲದೆ ದಯವಿಟ್ಟು ಗಲಾಟೆ ಮಾಡಬೇಡಿ ಎಂದು ಮನವಿ ಮಾಡಿದಾರೆ.

ಯುಗಾದಿ ಹಬ್ಬದ ಶುಭಾಶಯಗಳು, ಈ ವರ್ಷ ಕೆಲವರು ಆಚರಣೆ ಮಾಡದೆ ಇರಬಹುದು. ಆದರೆ ಮುಂದಿನ ವರ್ಷ ಎಲ್ಲರೂ ಸೇರಿಕೊಂಡು ಅದ್ಭುತವಾಗಿ ಹಬ್ಬ ಆಚರಣೆ ಮಾಡೋಣ ಥ್ಯಾಂಕ್ಯೂ ಎಂದು ತಿಳಿಸಿದ್ದಾರೆ.

Comments are closed.