ಕರ್ನಾಟಕ

ಜರ್ಮನಿಯಿಂದ ಬಂದ ವಿದ್ಯಾರ್ಥಿನಿಗೆ ಕೊರೊನಾ ಶಂಕೆ

Pinterest LinkedIn Tumblr


ರಾಮನಗರ: ಜಿಲ್ಲೆಯ ಚನ್ನಪಟ್ಟಣ ನಗರಕ್ಕೆ ಜರ್ಮನಿಯಿಂದ ವಾಪಸ್ಸಾದ 21 ವರ್ಷದ ವಿದ್ಯಾರ್ಥಿನಿಗೆ ಜ್ವರ ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.

ವಿದ್ಯಾರ್ಥಿನಿ ವಿದೇಶದಿಂದ ಬಂದು ಇಲ್ಲಿ ಜ್ವರ ಕಾಣಿಸಿಕೊಂಡ ಹಿನ್ನಲೆಯಲ್ಲಿ ಕರೊನಾ ಸೋಂಕು ಶಂಕೆ ವ್ಯಕ್ತವಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ವಿದ್ಯಾರ್ಥಿನಿಯ ತಂದೆ, ತಾಯಿಯವರಿಗೂ ತಪಾಸಣೆ ಮಾಡಲಾಗಿದೆ. ರಕ್ತ ಮಾದರಿಯನ್ನು ಹೆಚ್ಚಿನ ತಪಾಸಣೆಗಾಗಿ ಬೆಂಗಳೂರಿಗೆ ಕಳುಹಿಸಲಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟನೆ ನೀಡಿದ್ದಾರೆ.

Comments are closed.