ಕರ್ನಾಟಕ

ನನಗೆ ಇವನೇ ಬೇಕು, ಬರಲ್ಲ ಎಂದು ಹೇಳಿಕೆ ದಾಖಲಿಸಿದ್ದೇನೆ

Pinterest LinkedIn Tumblr


ತುಮಕೂರು: ಪ್ರೀತಿಸಿ ಮದುವೆಯಾದ ಜೋಡಿಗೆ ಹೆತ್ತವರೇ ವಿಲನ್ ಆಗಿದ್ದಾರೆ. ಅಲ್ಲದೆ ಪೋಷಕರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಪ್ರೇಮಿಗಳಿಬ್ಬರು ತಮ್ಮ ಅಳಲು ತೋಡಿಕೊಂಡಿರುವ ವಿಡಿಯೋ ವೈರಲ್ ಆಗಿದೆ.

ತುಮಕೂರು ಜಿಲ್ಲೆ ಶಿರಾ ತಾಲೂಕಿನ ಮದ್ದನಾಯಕನಹಳ್ಳಿ ಗ್ರಾಮದ ಲಕ್ಷ್ಮಿ ಹಾಗೂ ಶ್ರೀನಿವಾಸ್ ವಿಡಿಯೋ ಮಾಡಿ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ. ಕಳೆದ ಆರು ವರ್ಷಗಳಿಂದ ಪರಸ್ಪರ ಪ್ರೀತಿಸಿದ ಯುವ ಪ್ರೇಮಿಗಳು ಪೋಷಕರ ವಿರೋಧದ ನಡುವೆಯೂ ದೇವಾಲಯದಲ್ಲಿ ಮದುವೆಯಾಗಿದ್ದಾರೆ.

ಯುವತಿಯ ಅಳಲು:
ಪತಿಯ ಜೊತೆ ಕುಳಿತಿರುವ ಯುವತಿ, ನಮ್ಮ ಪ್ರೀತಿ ಬಗ್ಗೆ ಮನೆಯಲ್ಲಿ ಹೇಳಿದ್ರೆ ಪೋಷಕರು ಒಪ್ಪಲಿಲ್ಲ. ಬೇರೊಬ್ಬನ ಜೊತೆ ನನ್ನ ಮದುವೆ ನಿಶ್ಚಯ ಮಾಡಲು ಮುಂದಾದಗ ಮನೆಯಿಂದ ಹೊರಬಂದು ಶ್ರೀನಿವಾಸ್ ಜೊತೆಯಲ್ಲಿ ತಿರುಪತಿಗೆ ಹೋದೆ. ಅಲ್ಲಿಂದ ಮರಡಿ ರಂಗನಾಥಸ್ವಾಮಿ ದೇವಾಲಯದಲ್ಲಿ ಮದ್ವೆ ಆದೆ. ನಮ್ಮ ಮಿಸ್ಸಿಂಗ್ ಕಂಪ್ಲೇಂಟ್ ಕೊಟ್ಟಿದ್ದರಿಂದ ನೇರವಾಗಿ ಶಿರಾ ಟೌನ್ ಪೊಲೀಸ್ ಠಾಣೆಗೆ ಸ್ಪಷ್ಟನೆ ನೀಡಲು ಬಂದೆ. ಅಲ್ಲಿ ಪೋಷಕರು ನನ್ನ ಮನವೊಲಿಸಿ ಕರೆದುಕೊಂಡು ಹೋಗಲು ಪ್ರಯತ್ನಿಸಿದರು. ಪೊಲೀಸರ ಮುಂದೆಯೇ ನನಗೆ ಇವನೇ ಬೇಕು, ಬರಲ್ಲ ಎಂದು ಹೇಳಿಕೆ ದಾಖಲಿಸಿದ್ದೇನೆ. ಮಹಿಳಾ ಕೇಂದ್ರಕ್ಕೆ ತೆರಳಿ ಮದ್ವೆಯಾದ ಫೋಟೋ, ನಮ್ಮ ಐಡಿ ನೀಡಿ ಬಂದಿದ್ದೇವೆ ಎಂದು ಹೇಳಿದ್ದಾನೆ.

ಸಬ್ ರಿಜಿಸ್ಟಾರ್ ನಲ್ಲಿ ಮದುವೆಯಾಗಲು ಹೋದ್ರೆ ಪೋಷಕರು ಅವಕಾಶ ಮಾಡಿಕೊಡುತ್ತಿಲ್ಲ. ಕೆಲವರಿಂದ ಬೆದರಿಕೆ ಸಹ ಹಾಕಿಸುತ್ತಿದ್ದಾರೆ. ನನಗೆ ತಲೆ ಕೆಟ್ಟಿದೆ ಅಂತಾ ನಮ್ಮ ಪೋಷಕರು ಸುಳ್ಳು ಹೇಳುತ್ತಿದ್ದಾರೆ. ನಾನು ಪದವೀಧರಳಾಗಿದ್ದು, ಸ್ವಇಚ್ಛೆಯ ಮೇರೆಗೆ ಮದುವೆ ಆಗಿದ್ದೇನೆ ಎಂದು ಲಕ್ಷ್ಮಿ ಹೇಳಿಕೊಂದ್ದಾಳೆ.

ವಿಡಿಯೋದಲ್ಲಿ ಲಕ್ಷ್ಮಿ ಪತಿ ಶ್ರೀನಿವಾಸ್ ಮಾತನಾಡಿ, ನಮ್ಮ ಕುಟುಂಬಸ್ಥರು ಮದುವೆಯನ್ನು ಒಪ್ಪಿಕೊಂಡಿದ್ದಾರೆ. ಲಕ್ಷ್ಮಿ ಪೋಷಕರೇ ನಮ್ಮ ಕೊಲ್ಲಲು ಸಂಚು ರೂಪಿಸುತ್ತಿದ್ದಾರೆ. ರಕ್ಷಣೆ ಕೋರಿ ಈ ವಿಡಿಯೋ ಮಾಡುತ್ತಿದ್ದೇವೆ ಎಂದು ಹೇಳಿದ್ದಾನೆ.

ಅಲ್ಲದೆ ಮದುವೆ ನೋಂದಣಿಗೆ ಹೋದರೆ ಸಬ್ ರಿಜಿಸ್ಟಾರ್ ಕಚೇರಿ ಮುಂದೆ ಯುವತಿಯ ಪೋಷಕರ ಕಡೆಯವರು ಬಂದು ಪ್ರಾಣ ಬೆದರಿಕೆ ಒಡ್ಡುತ್ತಿದ್ದಾರೆ ಅಂತಾ ಹೇಳಿಕೊಂಡಿದ್ದಾರೆ. ನಾನು ಕಿಡ್ನಾಪ್ ಆಗಿಲ್ಲ, ನನ್ನ ಆಸೆಯಂತೆಯೇ ಮದುವೆಯಾಗಿದ್ದು, ನನ್ನ ತಲೆ ಸರಿ ಇದೆ. ನಾನು ಫಿಟ್ ಆ್ಯಂಡ್ ಫೈನ್ ಆಗಿದ್ದೀನಿ ಎಂದು ಯುವತಿ ವಿಡಿಯೋದಲ್ಲಿ ಹೇಳಿಕೊಂಡಿದ್ದಾಳೆ.

Comments are closed.