ಕರ್ನಾಟಕ

ತಿರುಮಲ ತಿಮ್ಮಪ್ಪನ ಲಡ್ಡು ಪ್ರಸಾದದ ಬೆಲೆಯಲ್ಲಿ ಹೆಚ್ಚಳ

Pinterest LinkedIn Tumblr

ಹೈದರಬಾದ್: ತಿರುಮಲ ತಿರುಪತಿ ತಿಮ್ಮಪ್ಪನ ಪ್ರಸಾದ ಲಡ್ಡು ಬೆಲೆಯಲ್ಲಿ ಹೆಚ್ಚಳವಾಗಿದೆ ಅಂತ ಸುದ್ದಿಗಳು ಹರಿದಾಡಲಾರಂಭಿಸಿವೆ.

ದೇವಸ್ಥಾನ ಹಾಗೂ ದೇವರ ಲಡ್ಡುವಿನ ಬೆಲೆಯ ಬಗ್ಗೆ ವದಂತಿಗಳನ್ನು ಹರಡಿಸುತ್ತಿರೋರ ವಿರುದ್ಧ ತಿರುಪತಿ ತಿರುಮಲ ದೇವಸ್ಥಾನ ಮಂಡಳಿಯ ಅಧ್ಯಕ್ಷರಾಗಿರೋ ವೈ.ವಿ.ಸುಬ್ಬಾರೆಡ್ಡಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ತಿರುಪತಿ ತಿಮ್ಮಪ್ಪನ ಲಡ್ಡು ದರ ಹೆಚ್ಚಿಗೆ ಮಾಡೋದಿಲ್ಲ ಅಂತ ಹೇಳಿರೋ ಅವರು, ಸುಳ್ಳು ಸುದ್ದಿಗಳಿಗೆ ಕಿವಿಗೊಡಬಾರದು ಅಂತ ಭಕ್ತರಲ್ಲಿ ಕೋರಿದ್ದಾರೆ.

Comments are closed.