ಕರ್ನಾಟಕ

ಸುಪ್ರೀಂ ಸ್ಪೀಕರ್ ಆದೇಶವನ್ನು ಎತ್ತಿ ಹಿಡಿದಿದೆ: ಸಿದ್ದರಾಮಯ್ಯ

Pinterest LinkedIn Tumblr


ಬೆಂಗಳೂರು: ಹದಿನೇಳು ಮಂದಿ ಅನರ್ಹ ಶಾಸಕರ ಪ್ರಕರಣದ ಸಂಬಂಧ ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಕುರಿತು ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ , ಸ್ಪೀಕರ್ ಮಾಡಿರುವ ಆದೇಶವನ್ನು ಸುಪ್ರೀಂಕೋರ್ಟ್ ಭಾಗಶಃ ಎತ್ತಿ ಹಿಡಿದಿದೆ. ಈ ತೀರ್ಪುನ್ನು ಸ್ವಾಗತಿಸುತ್ತೇನೆ ಎಂದು ತಿಳಿಸಿದ್ದಾರೆ.

ಕಾಂಗ್ರೆಸ್ ನ 14 ಜನ ಶಾಸಕರು ಜೆಡಿಎಸ್ ನ ಮೂರು ಶಾಸಕರು ರಾಜೀನಾಮೆ ಕೊಟ್ಟಿದ್ದರು. ಅದನ್ನು ನಾವು ಅನರ್ಹಗೊಳಿಸುವಂತೆ ಸ್ಪೀಕರ್ ಗೆ ದೂರು ನೀಡಿದ್ದೇವು. ನಮ್ಮ ಮನವಿಯಂತೆ ಸ್ಪೀಕರ್ ಅವರನ್ನು ಅನರ್ಹ ಮಾಡಿದ್ದರು. ಅವರು ಅನರ್ಹರು ಮತ್ತು ಈ ಅವಧಿಗೆ ಪೂರ್ಣ ಚುನಾವಣೆಗೆ ನಿಲ್ಲಬಾರದು ಅಂತ ಆದೇಶ ನೀಡಿದ್ದರು. ಅನರ್ಹತೆಯನ್ನು ಕೋರ್ಟ್ ಎತ್ತಿ ಹಿಡಿದರೆ. ಆದರೆ ಈ ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎಂದು ಹೇಳಿರುವುದನ್ನು ತಳ್ಳಿ ಹಾಕಿದೆ.

ಪ್ರಜಾಪ್ರಭುತ್ವದಲ್ಲಿ ಶಾಸಕರು ರಾಜಿನಾಮೆ ನೀಡಲು ಅವಕಾಶ ಇದೆ. ಅವರ ರಾಜಿನಾಮೆ ಸ್ವಯಂಪ್ರೇರಿತ ಹಾಗೂ ನೈಜತೆಯಿಂದ ಕೂಡಿರಬೇಕು. ಆ ರೀತಿ ಇಲ್ಲದಿದ್ದರೆ ಅವರ ರಾಜಿನಾಮೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದರು.

ಯಾವುದೇ ಪಕ್ಷದಿಂದ ಆಯ್ಕೆಯಾಗಿರುವ ಶಾಸಕರು ಪಕ್ಷಾಂತರ ಮಾಡುವ ನೈತಿಕತೆಯ ಬಗ್ಗೆ ಸುಪ್ರೀಂ ಕೋರ್ಟ್ ಪ್ರಶ್ನೆ ಮಾಡಿದೆ. ಸ್ಪೀಕರ್ ಆದೇಶವನ್ನುಕೋರ್ಟ್ ಒಪ್ಪಿದೆ. ಇದು ಪಕ್ಷಾಂತರಿಗಳಿಗೆ ತಕ್ಕ ಪಾಠ. ಪಕ್ಷಾಂತರವನ್ನು ಸುಪ್ರೀಂ ಕೋರ್ಟ್ ಒಪ್ಪಿಕೊಂಡಿಲ್ಲ. ಜನರು ಕೂಡ ಪಕ್ಷಾಂತರಿಗಳನ್ನು ಒಪ್ಪಿಕೊಳ್ಳುವುದಿಲ್ಲ. ಚುನಾವಣೆಯಲ್ಲಿ ಸ್ಪರ್ಧಿಸಿದರೂ ಅವರನ್ನು ಸೋಲಿಸಲಿದ್ದಾರೆ. ಗುಜರಾತ್ ಮಹಾರಾಷ್ಟ್ರದ ಹಾಗೆ ಇಲ್ಲಿಯೂ ಕೂಡ ಸೊಲಿಸುತ್ತಾರೆ, ಇದು ಖಂಡಿತಾ.

ಈ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸುವ ಅಗತ್ಯವಿಲ್ಲ. ಆದರೆ ಪಕ್ಷದ ವೇದಿಕೆಯಲ್ಲಿ ಚರ್ಚಿಸಿ ತೀರ್ಮಾನ ಮಾಡುತ್ತೇವೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.

Comments are closed.