ಕರ್ನಾಟಕ

ಮುಖ್ಯಮಂತ್ರಿ ಹೇಳೋದು ಸುಳ್ಳು ಅಂತ ಜನರೇ ಹೇಳುತ್ತಿದ್ದಾರೆ: ಸಿದ್ದರಾಮಯ್ಯ

Pinterest LinkedIn Tumblr


ಮಂಡ್ಯ: ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಮತ್ತು ರಾಜ್ಯ ಸರಕಾರದ ಆಡಳಿತ ವಿರುದ್ದ ಗುಟುರು ಹಾಕುತ್ತಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತೆ ಕಿಡಿಕಾರಿದ್ದಾರೆ.

ಮಂಡ್ಯದ ಕಾಂಗ್ರೆಸ್ ಕಚೇರಿಯಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಬುಧವಾರ ಜಮಖಂಡಿಗೆ ಹೋಗಿದ್ದೆ ಅಲ್ಲಿ ಜನ ನೆರೆ ಸಂತ್ರಸ್ತರ ಬಗ್ಗೆ ಯಡಿಯೂರಪ್ಪ ಸರಿನಾ… ಸರಿನಾ ಎಂದು ಜನರನ್ನು ಕೇಳಿದೆ. ಯಡಿಯೂರಪ್ಪ ಹೇಳೋದು ಸುಳ್ಳು ಅಂತ ಜನಖಂಡಿಯ ಜನ ಹೇಳಿದ್ರು. ಅಧಿಕಾರಕ್ಕೆ ಬಂದು ಮೂರು ತಿಂಗಳಾದ್ರೂ ಯಡಿಯೂರಪ್ಪ ರೈತರಿಗೆ ಬೆಳೆ ಪರಿಹಾರ ಕೊಟ್ಟಿಲ್ಲ ಎಂದರು.

ಉತ್ತರ ಕರ್ನಾಟಕದ ನೆರೆ ಸಂತ್ರಸ್ತರು ಬಸ್ ನಿಲ್ದಾಣದಲ್ಲಿ ದೀಪಾವಳಿ ಆಚರಿಸಿದ್ದಾರೆ. 1200 ಕೋಟಿ ಹಣ ಸಾಕಾಗಲ್ಲ. 35165 ಕೋಟಿ ಹಣವನ್ನು ಸಂತ್ರಸ್ತರಿಗೆ ಬಿಜೆಪಿ ಅವರೇ ಕೇಂದ್ರ ಸರಕಾರವನ್ನು ಕೇಳಿದ್ದಾರೆ. ಸಂತ್ರಸ್ತರ ಬಗ್ಗೆ ಪತ್ರಿಕೆಯಲ್ಲಿ ಬಂದ ವರದಿಯನ್ನು ಸಿದ್ದರಾಮಯ್ಯ ಪ್ರದರ್ಶಿಸಿದರು.

ಇದನ್ನು ಯಡಿಯೂರಪ್ಪಗೆ ತೋರ್ಸಿ. ಆಗಲಾದರೂ ಗೊತ್ತಾಗಲಿ ಎಂದು ಸಿದ್ದರಾಂಯ್ಯ ಸೂಚನೆ ನೀಡಿದರು.

Comments are closed.