ಕರ್ನಾಟಕ

ಮುಂದಿನ ವರ್ಷದೊಳಗಾಗಿ 16,000 ಪೊಲೀಸ್ ಹುದ್ದೆ ಭರ್ತಿ ಮಾಡಲು ಕ್ರಮ 

Pinterest LinkedIn Tumblr

ಬೆಂಗಳೂರು: 16,000 ಪೊಲೀಸ್ ಹುದ್ದೆಯನ್ನು ವರ್ಷದೊಳಗೆ ಭರ್ತಿ ಮಾಡಲಾಗುವುದು ಅಂತ ಸಿಎಂ ಬಿಎಸ್‌ ಯಡಿಯೂರಪ್ಪ ಭರವಸೆ ನೀಡಿದ್ದಾರೆ. ಸಿಎಆರ್ ಕೇಂದ್ರ ಮೈದಾನದಲ್ಲಿ ಸೋಮವಾರ ಆಯೋಜಿಸಿದ್ದ ಪೊಲೀಸ್ ಹುತಾತ್ಮರ ದಿನಾಚರಣೆಯಲ್ಲಿ ಮಾತನಾಡುತ್ತ ಈ ವಿಷಯ ತಿಳಿಸಿದರು.

ಇದೇ ವೇಳೆ ಅವರು ಮಾತನಾಡಿದ ಕರ್ತವ್ಯದಲ್ಲಿದ್ದಾಗ ಮೃತಪಡುವ ಪೊಲೀಸರ ಅಂತ್ಯಸಂಸ್ಕಾರಕ್ಕೆ ನೀಡುತ್ತಿದ್ದ ಭತ್ಯೆಯನ್ನು 5ರಿಂದ 10 ಸಾವಿರ ರೂ.ಗೆ ಏರಿಸಿಲಾಗಿದೆ. ಕಷ್ಟ ಪರಿಹಾರ ಭತ್ಯೆ 2 ಸಾವಿರ ರೂ. ಹೆಚ್ಚಾಗಿದೆ ಅಂತ ಅವರು ಹೇಳಿದರು.

ಇನ್ನು ವಿಶೇಷ ಅಹ್ವಾನಿತರಾಗಿ ಭಾಗವಹಿಸಿದ್ದ ಕ್ರಿಕೆಟಿಗ ಅನಿಲ್ ಕುಂಬ್ಳೆ ಮತ್ತು ನಟ ಪುನೀತ್ ರಾಜ್​ಕುಮಾರ್ ಪೊಲೀಸರ ಹುತಾತ್ಮ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸುವ ಮೂಲಕ ಗೌರವ ಸಲ್ಲಿಸಿದರು. ಸರ್ಕಾರದ ಮುಖ್ಯ ಕಾರ್ಯದರ್ಶಿ ವಿಜಯಭಾಸ್ಕರ್, ಡಿಜಿಪಿ ನೀಲಮಣಿ ಎನ್. ರಾಜು, ಗೃಹ ಇಲಾಖೆ ಪ್ರಧಾನ ಕಾರ್ಯದರ್ಶಿ ರಜನೀಶ್ ಗೋಯಲ್, ನಗರ ಪೊಲೀಸ್ ಆಯುಕ್ತ ಭಾಸ್ಕರ್ ರಾವ್ ಇದ್ದರು.

Comments are closed.