ಕರ್ನಾಟಕ

12 ಮಂದಿ ವಕೀಲರ ಹೆಸರನ್ನು ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು

Pinterest LinkedIn Tumblr

ಬೆಂಗಳೂರು: ರಾಜ್ಯ ಹೈಕೋ‌ರ್ಟ್‌ನ 12 ಮಂದಿ ವಕೀಲರ ಹೆಸರುಗಳನ್ನು ಹೈಕೋರ್ಟ್‌ ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾಗಿದೆ.

ಸುಪ್ರೀಂ ಕೋರ್ಟ್‌ ಮುಖ್ಯ ನ್ಯಾಯಮೂರ್ತಿ ರಂಜನ್‌ ಗೊಗೊಯಿ ನೇತೃತ್ವದ ಕೊಲಿಜಿಯಂ ಕೇಂದ್ರ ಸರ್ಕಾರಕ್ಕೆ ಗುರುವಾರ ಈ ಕುರಿತಂತೆ ಶಿಫಾರಸು ಮಾಡಿದೆ.

ನ್ಯಾಯಮೂರ್ತಿ ಹುದ್ದೆಗೆ ಶಿಫಾರಸು ಮಾಡಲಾದ ವಕೀಲರು

ನೇರನಹಳ್ಳಿ ಶ್ರೀನಿವಾಸನ್‌ ಸಂಜಯಗೌಡ, ಮೂಲಿಮನಿ ಜ್ಯೋತಿ, ರಂಗಸ್ವಾಮಿ ನಟರಾಜ್‌, ನಾಗೇಂದ್ರ ರಾಮಚಂದ್ರ ನಾಯಕ್‌, ಚಂದನಗೌಡರ ಹೇಮಂತ, ರವಿ ವೆಂಕಪ್ಪ ಹೊಸಮನಿ, ಪ್ರದೀಪ್‌ ಸಿಂಗ್‌ ಯೆರೂರು ಮತ್ತು ಮಹೇಶನ್‌ ನಾಗಪ್ರಸನ್ನ, ಸವಣೂರು ವಿಶ್ವಜಿತ್‌ ಶೆಟ್ಟಿ, ಮರಳೂರು ಇಂದ್ರಕುಮಾರ್ ಅರುಣ್‌, ಮುಹಮ್ಮದ್ ಗೌಸ್‌ ಶುಕೂರ್ ಕಮಲ್‌ ಹಾಗೂ ಇಂಗಳಗುಪ್ಪೆ ಸೀತಾರಾಮಯ್ಯ ಇಂದಿರೇಶ್ .

Comments are closed.