ಕರ್ನಾಟಕ

ರಾಜ್ಯ ಉಪಚುನಾವಣೆಗೆ ಹೊಸ ದಿನಾಂಕ ಪ್ರಕಟ

Pinterest LinkedIn Tumblr


ಬೆಂಗಳೂರು: ಸುಪ್ರೀಂಕೋರ್ಟ್​ ಆದೇಶದಂತೆ ಕರ್ನಾಟಕದ 15 ವಿಧಾನಸಭೆಗೆ ನಡೆಯಬೇಕಿದ್ದ ಉಪಚುನಾವಣೆ ದಿನಾಂಕವನ್ನು ತಡೆಹಿಡಿಯಲಾಗಿತ್ತು. ಇದೀಗ ಈ ಕ್ಷೇತ್ರಗಳ ಉಪಚುನಾವಣೆಗೆ ಚುನಾವಣಾ ಆಯೋಗ ದಿನಾಂಕವನ್ನು ನಿಗದಿ ಮಾಡಿದೆ.

ಡಿಸೆಂಬರ್​ 5ರಂದು ಮತದಾನ ನಡೆಯಲಿದ್ದು, ಡಿಸೆಂಬರ್ 9ರಂದು ಮತ ಎಣಿಕೆ ಪ್ರಕ್ರಿಯೆ ನಡೆಯಲಿದೆ. ನವೆಂಬರ್​ 11ರಂದು ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ನವೆಂಬರ್​ 18 ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದೆ. ನವೆಂಬರ್ 19ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನವೆಂಬರ್ 21ರಂದು ನಾಮಪತ್ರ ಹಿಂಪಡೆದುಕೊಳ್ಳಲು ಕೊನೇ ದಿನವಾಗಿದೆ. ಒಟ್ಟಾರೆ ಡಿಸೆಂಬರ್​ 11ರೊಳಗೆ ಚುನಾವಣಾ ಪ್ರಕ್ರಿಯೆ ಸಂಪೂರ್ಣ ಮುಕ್ತಾಯಗೊಳ್ಳಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.

ಯಾವ ಕ್ಷೇತ್ರಗಳಿಗೆ ಉಪಚುನಾವಣೆ

ಅಥಣಿ
ಕಾಗವಾಡ
ಗೋಕಾಕ್​
ಯಲ್ಲಾಪುರ
ಹಿರೇಕೆರೂರು
ರಾಣೆಬೆನ್ನೂರು
ವಿಜಯನಗರ
ಚಿಕ್ಕಬಳ್ಳಾಪುರ
ಕೆ.ಆರ್.ಪುರ
ಯಶವಂತಪುರ
ಮಹಾಲಕ್ಷ್ಮೀ ಲೇಔಟ್
ಶಿವಾಜಿನಗರ
ಹೊಸಕೋಟೆ
ಕೆ.ಆರ್​.ಪೇಟೆ
ಹುಣಸೂರು

ಈ 15 ಕ್ಷೇತ್ರಗಳಿಗೆ ಅಕ್ಟೋಬರ್​ 21ರಂದು ಉಪಚುನಾವಣೆ ನಡೆಸುವುದಾಗಿ ಈ ಹಿಂದೆಯೇ ಆಯೋಗ ಘೋಷಿಸಿತ್ತು. ಆದರೆ, 15 ಕ್ಷೇತ್ರಗಳ ಶಾಸಕರ ಅನರ್ಹತೆ ಅರ್ಜಿ ಸುಪ್ರೀಂಕೋರ್ಟ್​ನಲ್ಲಿ ವಿಚಾರಣೆ ನಡೆಯುತ್ತಿದೆ. ಪ್ರಕರಣದ ಬಗ್ಗೆ ಕೂಲಂಕಷ ವಿಚಾರಣೆ ಆಗಬೇಕಿರುವುದರಿಂದ ಹಾಗೂ ಚುನಾವಣೆ ಮುಂದೂಡಿಕೆಗೆ ಆಯೋಗದ ಯಾವುದೇ ಅಭ್ಯಂತರ ಇಲ್ಲದಿದ್ದಾಗ ಸುಪ್ರೀಂಕೋರ್ಟ್​ ಚುನಾವಣೆಯನ್ನು ಮುಂದೂಡಿತ್ತು. ಅದರಂತೆ ಇದೀಗ ಆಯೋಗ ಉಪಚುನಾವಣೆಗೆ ಮತ್ತೊಮ್ಮೆ ಹೊಸ ದಿನಾಂಕವನ್ನು ಪ್ರಕಟಿಸಿದೆ.

Comments are closed.