ಕರ್ನಾಟಕ

ಕಳೆದುಹೋದ ಈಶ್ವರಪ್ಪ ಪುತ್ರಿಯ ಮೊಬೈಲ್ ಬಿಜೆಪಿ ಕಾರ್ಯಕರ್ತನ ಮನೆಯಲ್ಲಿ ಪತ್ತೆ

Pinterest LinkedIn Tumblr


ಬಾಗಲಕೋಟೆ: ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಅವರು ಮಗಳ ಮೊಬೈಲ್ ಬಾಗಲಕೋಟೆಯ ಬಿಜೆಪಿ ಕಾರ್ಯಕರ್ತರೊಬ್ಬರ ಮನೆಯಲ್ಲಿ ಪತ್ತೆಯಾಗಿದೆ.

ನನ್ನ ಮೊಬೈಲ್ ಕಳೆದು ಹೋಗಿತ್ತು ಎಂದು ಈಶ್ವರಪ್ಪ ಅವರ ಮಗಳು ಕೆ ಶಾಂತಾ ಬೆಂಗಳೂರು ನಾರ್ತ್ ಈಸ್ಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದರು. ಈ ಮೊಬೈಲ್ ಈಗ ಬಿಜೆಪಿ ಕಾರ್ಯಕರ್ತ ಲಕ್ಷ್ಮಣ ಬಂಡಿವಡ್ಡರ್ ಮನೆಯಲ್ಲಿ ಪತ್ತೆಯಾಗಿದೆ.

ಈಶ್ವರಪ್ಪ ಅವರ ಬೆಂಗಳೂರು ಗಾಂಧಿಭವನದ 41 ನಂ ನಿವಾಸದಿಂದ ಸೆಷ್ಟೆಂಬರ್ 13 ರಂದು ಅವರ ಪುತ್ರಿ ಕೆ ಶಾಂತಾರ ಮೊಬೈಲ್ ಕಳುವಾಗಿತ್ತು. ಇದನ್ನು ಹುಡುಕಿಕೊಡಿ ಎಂದು ಕೆ ಶಾಂತಾ ಪೊಲೀಸರಿಗೆ ದೂರು ನೀಡಿದ್ದರು. ಶಾಂತಾ ಅವರ ಮೊಬೈನನ್ನು ಟ್ರ್ಯಾಕ್ ಮಾಡಿದ ಪೊಲೀಸರಿಗೆ ಬಾಗಲಕೋಟೆಯ ಬಂಟನೂರು ಗ್ರಾಮದಲ್ಲಿ ಇದೆ ಎಂದು ತಿಳಿದುಬಂದಿತ್ತು.

ಈ ಮಾಹಿತಿಯನ್ನು ಬೆಂಗಳೂರು ನಾರ್ತ್ ಈಸ್ಟ್ ಪೊಲೀಸರು ಲೋಕಾಪುರ ಪೊಲೀಸರಿಗೆ ನೀಡಿದ್ದರು. ಮಾಹಿತಿ ಮೇರೆಗೆ ಆ ಗ್ರಾಮಕ್ಕೆ ಹೋದ ಅವರು ಲಕ್ಷ್ಮಣ ಬಂಡಿವಡ್ಡರ್ ಮನೆಯಿಂದ ಮೊಬೈಲ್ ಅನ್ನು ವಶಕ್ಕೆ ಪಡೆದು ಬೆಂಗಳೂರಿಗೆ ಕಳುಹಿಸಿಕೊಟ್ಟಿದ್ದಾರೆ. ಆದರೆ ಆ ಮೊಬೈಲ್ ಹೇಗೆ ಕಾರ್ಯಕರ್ತನ ಮನೆಗೆ ಹೋಯಿತು. ಓರ್ವ ಕಾರ್ಯಕರ್ತನಾಗಿ ಹೋಗಿ ಸಚಿವರ ಮಗಳ ಮೊಬೈಲ್ ಕದ್ದುಕೊಂಡು ಬಂದಿದ್ದನೋ ಎಂಬ ಅನುಮಾನಗಳು ಮೂಡುತ್ತಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Comments are closed.