ಕರ್ನಾಟಕ

ತಮ್ಮ ಸೋಲಿಗೆ ಕಾರಣ ಹೇಳಿದ ಸಿದ್ದರಾಮಯ್ಯ

Pinterest LinkedIn Tumblr


ಚಾಮರಾಜನಗರ: 5 ವರ್ಷ ಬಹಳ ಜಲ್ದಿ ಮುಗಿದೋಗ್ಬುಡ್ತು ನಾನು ಇನ್ನೊಮ್ಮೆ ಅಧಿಕಾರಕ್ಕೆ ಬರ್ತೇನೆ, ಮುಖ್ಯಮಂತ್ರಿ ಆಗುತ್ತೇನೆ ಅಂದುಕೊಂಡಿದ್ದೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೋಮವಾರ ಹೇಳಿದರು.

ನಗರದಲ್ಲಿಂದು ಈ ಸಂಬಂಧವಾಗಿ ಮಾತನಾಡಿದ ಅವರು, ಬಹಳ ಜನ ದ್ವೇಷ, ಅಸೂಯೇ ಪಟ್ಟುಕೊಂಡು ಇನ್ನೊಮ್ಮೆ ಮುಖ್ಯಮಂತ್ರಿ ಆಗೋದನ್ನು ತಪ್ಪಿಸಿದರು. ಹಾಗಾಗಿ ನಾನು ಮತ್ತೆ ಮುಖ್ಯಮಂತ್ರಿ ಆಗಲಿಕ್ಕೆ ಆಗಲಿಲ್ಲ, 5 ವರ್ಷಗಳ ಕಾಲ ಒಳ್ಳೆ ಕೆಲಸ ಮಾಡಿದ್ದೇವೆ. ಜನರಿಗೆ ಕೊಟ್ಟಂತಹ ಭರವಸೆಗಳನ್ನು ಈಡೇರಿಸಿದ್ದೇವೆ ಎಂದು ಅವರು ತಿಳಿಸಿದರು.

ಇನ್ನು ನನ್ನ ಆಡಳಿತದಲ್ಲಿ ಯಾವುದೇ ಹಗರಣವೂ ಕೂಡ ನಡೆದಿಲ್ಲ, ಎಲ್ಲಾ ವರ್ಷದ ಜನರಿಗೆ ಒಂದಲ್ಲ ಒಂದು ಕಾರ್ಯಕ್ರಮಗಳ ಕೊಟ್ಟಿದ್ದೇವೆ. ಹಾಗಾಗಿ ಮನೆಗೆ ಮತ್ತೊಮ್ಮೆ ಜನ ಆಶೀರ್ವಾದ ಮಾಡುತ್ತಾರೆ ಅನ್ನೋ ನಂಬಿಕೆ ಇತ್ತು. ಆದರೆ, ಸಿದ್ದರಾಮಯ್ಯ ಜಾತಿ, ವಿರೋಧಿ, ಧರ್ಮ ವಿರೋಧಿ ಎಂದು ಅಪಪ್ರಚಾರ ಮಾಡಿ ನಮ್ಮನ್ನ ಸೋಲಿಸಿದರು ಎಂದು ಚಾಮರಾಜನಗರದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಪ್ರತಿಕ್ರಿಯಿಸಿದ್ದಾರೆ.

Comments are closed.