ಕರ್ನಾಟಕ

ಸಿದ್ದಾರ್ಥ ನಾಪತ್ತೆ ಪ್ರಕರಣ ಸೂಕ್ತ ತನಿಖೆ ನಡೆಯಲಿ: ಸಿದ್ದಾರ್ಥ ಕಾರು ಚಾಲಕನ ಸಹೋದರ ಹೇಳಿದ್ದೇಕೆ..?

Pinterest LinkedIn Tumblr


ಯಾದಗಿರಿ: ಕೆಫೆ ಕಾಫಿ ಡೇ ಸಂಸ್ಥಾಪಕ ಉದ್ಯಮಿ ವಿ.ಜಿ‌. ಸಿದ್ದಾರ್ಥ ನಾಪತ್ತೆ ಪ್ರಕರಣ ಸೂಕ್ತ ತನಿಖೆ ನಡೆಸಬೇಕೆಂದು ಸಿದ್ದಾರ್ಥ ಚಾಲಕ ಬಸವರಾಜ ಪಾಟೀಲ ಅವರ ಸಹೋದರ ಹಾಗೂ ಸಂಬಂಧಿಕರು ಒತ್ತಾಯಿಸಿದ್ದಾರೆ.

ಸಿದ್ದಾರ್ಥ ನಾಪತ್ತೆ ಪ್ರಕರಣ ಸೂಕ್ತ ತನಿಖೆ ನಡೆಯಲಿ

ಸಿದ್ದಾರ್ಥ ಅವರ ಹತ್ತಿರ ಕಳೆದ 3 ವರ್ಷದಿಂದ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ಬಾಚಿಮಟ್ಟಿ ಗ್ರಾಮದ ಬಸವರಾಜ ಪಾಟೀಲ ಅವರು ಕಾರು ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ನಿನ್ನೆ ನಾಪತ್ತೆಯಾದ ಬಗ್ಗೆ ಸಿದ್ದಾರ್ಥ ಕಾರು ಚಾಲಕ ಬಸವರಾಜ ಪಾಟೀಲ ಅವರು ದೂರು ನೀಡಿದ್ದಾರೆ. ಕಾರು ಚಾಲಕ ಬಸವರಾಜ ಅವರನ್ನು ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ. ಸಿದ್ದಾರ್ಥ ನಾಪತ್ತೆ ಘಟನೆಯಿಂದ ಬಸವರಾಜ ಪಾಟೀಲ ಅವರ ಕುಟುಂಬಸ್ಥರು ಆತಂಕದಲ್ಲಿದ್ದಾರೆ.

ನಾನು ಯಾವುದೇ ತಪ್ಪು ಮಾಡಿಲ್ಲ

ನಮ್ಮ ಸಹೋದರ ಸಿದ್ದಾರ್ಥ ಹತ್ತಿರ ಕಾರು ಚಾಲಕನಾಗಿ ಕೆಲಸ ಮಾಡುತ್ತಿದ್ದು, ಒಳ್ಳೆಯ ರೀತಿ ಮಾಲೀಕರು ಇದ್ದಾರೆ ಚೆನ್ನಾಗಿ ನೋಡಿಕೊಳ್ಳುತ್ತಿದ್ದರು ಎಂದು ಬಸವರಾಜ ಕುಟುಂಬಸ್ಥರಿಗೆ ಹೇಳಿದ್ದ ಅದೇ ರೀತಿ ಸಿದ್ದಾರ್ಥ ನಾಪತ್ತೆ ಬಗ್ಗೆ ಮಾಹಿತಿ ನೀಡಿ ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಕುಟುಂಬಸ್ಥರಿಗೆ ಹೇಳಿದ್ದಾರೆ ಎಂದು ತಿಳಿಸಿದರು.

ಈ ಬಗ್ಗೆ ಸೂಕ್ತ ತನಿಖೆಯಾಗಲಿ ಅದೆ ರೀತಿ ಸಿದ್ದಾರ್ಥ ಅವರು ಸುರಕ್ಷಿತವಾಗಿ ದೊರೆಯಲಿ ಎಂದು ಬಸವರಾಜ ಕುಟುಂಬಸ್ಥರು ಹಾರೈಸಿದ್ದಾರೆ.

Comments are closed.