ಕರ್ನಾಟಕ

ಸುದ್ದಿಗೋಷ್ಠಿ ಸಂದರ್ಭ ಕಣ್ಣೀರು ಹಾಕಿದ ಸ್ಪೀಕರ್..!

Pinterest LinkedIn Tumblr


ಬೆಂಗಳೂರು: ಬೆಂಗಳೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಮೇಶ್ ಕುಮಾರ್, ಇಂದು ನಿಧನರಾದ ಕಾಂಗ್ರೆಸ್‌ನ ಮಾಜಿ ಕೇಂದ್ರ ಸಚಿವ ಜೈಪಾಲ್ ರೆಡ್ಡಿಗೆ(77) ಸಂತಾಪ ಸೂಚಿಸಿದರು.

ಈ ವೇಳೆ ಮಾತನಾಡಿದ ಸ್ಪೀಕರ್, ಇದು ಅತ್ಯಂತ ಕೆಟ್ಟ ದಿನ ನನಗೆ. ಜೈಪಾಲ್ ರೆಡ್ಡಿ ನನ್ನ ರಾಜಕೀಯ ಮಾರ್ಗದರ್ಶಿ. ನನ್ನ ರಾಜಕೀಯ ಜೀವನಕ್ಕೆ ಹಿರಿಯಣ್ಣನ ರೀತಿಯಲ್ಲಿ ಪ್ರೀತಿಸಿದವರು. ಒಬ್ಬ ಉತ್ತಮ ಸಂಸದೀಯ ಪಟು, ಉತ್ತಮ ಮಾನವೀಯ ಮೌಲ್ಯ ಇರುವ ವ್ಯಕ್ತಿ. ಪಕ್ಷಾಂತರ ನಿಷೇಧ ಕಾಯ್ದೆ ಬಗ್ಗೆ ಅವರು ಮಾತನಾಡಿದ್ದಾರೆ ಎಂದು ರಮೇಶ್ ಕುಮಾರ್ ಸುದ್ದಿಗೋಷ್ಠಿ ವೇಳೆ ಭಾವುಕರಾಗಿದ್ದಾರೆ.

ಅಲ್ಲದೇ, ಅತ್ಯಂತ ನೋವು ಆಗುತ್ತದೆ. ಇಂತಹ ಮೇರು ವ್ಯಕ್ತಿಗಳು ನಮ್ಮ ದೇಶದಲ್ಲಿ ಇದ್ದರು ಅನ್ನೋದೆ ನಮಗೆ ಹೆಮ್ಮೆ . ನನ್ನ ನಾಲ್ಕು ದಶಕದ ಪ್ರಮುಖ ಘಟ್ಟ, ಇದುವೇ ಕೊನೆಯ ಘಟ್ಟ ಎಂದು ಭಾವಿಸುತ್ತೇನೆ ಎಂದರು.

Comments are closed.