ಕರ್ನಾಟಕ

ಸ್ಪೀಕರ್​ ​ ಕಾಂಗ್ರೆಸ್​​ ಏಜೆಂಟ್​​​ರಂತೆ ವರ್ತನೆ’: ಶೋಭಾ ಕರಂದ್ಲಾಜೆ

Pinterest LinkedIn Tumblr


ಬೆಂಗಳೂರು: ಮುಖ್ಯಮಂತ್ರಿ ವಿಶ್ವಾಸ ಮತಯಾಚನೆ ಎಂದು ಅಧಿವೇಶನ ಆರಂಭಿಸಿ ಸಮಯ ಮುಂದೂಡುವ ಕೆಲಸ ಮಾಡುತ್ತಿದ್ದಾರೆ ಎಂದು ಚಿಕ್ಕಮಗಳೂರು-ಉಡುಪಿ ಕ್ಷೇತ್ರದ ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಅವರು ಹೇಳಿದರು.

ದೇವನಹಳ್ಳಿಯ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಸ್ಪೀಕರ್ ಪ್ರಜಾಪ್ರಭುತ್ವ, ಸಂವಿಧಾನ ವಿರೋಧಿಯಾಗಿ ನಡೆದುಕೊಳ್ಳುತ್ತಿದ್ದಾರೆ ಎಂದು ಅವರು ಸ್ಪೀಕರ್​ ವಿರುದ್ಧ ಆರೋಪ ಮಾಡಿದರು.

ಇನ್ನು ಒಂದು ಕಡೆ ರಾಜೀನಾಮೆಯನ್ನು ಸ್ಪೀಕರ್ ಅಂಗೀಕಾರ ಮಾಡುತ್ತಿಲ್ಲ, ಮತ್ತೊಂದೆಡೆ ವಿಶ್ವಾಸ ಮತಯಾಚನೆಗೂ ಅವಕಾಶ ನೀಡುತ್ತಿಲ್ಲ. ಸ್ಪೀಕರ್ ಅವರು ಕಾಂಗ್ರೆಸ್ ಏಜೆಂಟ್​ರಂತೆ ವರ್ತಿಸುತ್ತಿದ್ದಾರೆ. ಮುಖ್ಯಮಂತ್ರಿ ಮೇಲೆ ಜನರಿಗೆ ಮತ್ತು ಶಾಸಕರಿಗೆ ವಿಶ್ವಾಸವಿಲ್ಲ ಎಂದು ಸಂಸದೆ ಶೋಭಾ ಕರಂದ್ಲಾಜೆ ಅವರು ನುಡಿದರು.

ಜುಲೈ 18ರಂದು ಮೈತ್ರಿ ಸರ್ಕಾರ ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಅವರು ವಿಶ್ವಾಸ ಮತಯಾಚನೆ ಮಾಡುತ್ತೇನೆ ಎಂದು ಸ್ಪೀಕರ್​ ಬಳಿ ಒಂದು ವಾರದ ಹಿಂದೆ ಕೇಳಿಕೊಂಡಿದ್ದರು ಅದರಂತೆ ಇಂದು ಬೆಳಗ್ಗೆಯಿಂದ ಸದನ ಆರಂಭವಾಗಿದೆ ಆದರೆ ಇನ್ನು ಸಹ ವಿಶ್ವಾಸ ಮತಯಾಚನೆ ಮಾಡಿಲ್ಲವಾದರಿಂದ ಶೋಭಾ ಕರಂದ್ಲಾಜೆ ಅವರು ಮೇಲಿನ ಹೇಳಿಕೆಯನ್ನು ನೀಡಿದ್ದಾರೆ.

Comments are closed.