ಕರ್ನಾಟಕ

ವಾಲ್ಮಿಕಿ ಸಮುದಾಯದ ಒಳಿತಿಗಾಗಿ ಪಕ್ಷಾತೀತವಾಗಿ ಶಾಸಕರು ರಾಜಿನಾಮೆ ನೀಡಿ: ಪ್ರಸನ್ನಾನಂದ ಸ್ವಾಮೀಜಿ

Pinterest LinkedIn Tumblr

ಬೆಂಗಳೂರು: ನಮ್ಮ ಸಮುದಾಯದ 17 ಶಾಸಕರಿದ್ದಾರೆ. ನೀವು ನನ್ನ ಕೈಗೆ ರಾಜಿನಾಮೆ ನೀಡಿ ಮುಖ್ಯಮಂತ್ರಿ ಕುಮಾರಸ್ವಾಮಿ ಅಲ್ಲ, ಅವರಪ್ಪನೂ ನನ್ನ ಮಾತುಕ ಕೇಳೋ ಹಂಗೆ ಮಾಡುತ್ತೇನೆ ಎಂದು ವಾಲ್ಮಿಕಿ ಸಮುದಾಯದ ಪ್ರಸನ್ನಾನಂದ ಸ್ವಾಮೀಜಿ ಹೇಳಿದ್ದಾರೆ.

ವಾಲ್ಮಿಕಿ ಸಮುದಾಯದ ಒಳಿತಿಗಾಗಿ ಪಕ್ಷಾತೀತವಾಗಿ ಶಾಸಕರು ರಾಜಿನಾಮೆ ನೀಡಬೇಕು. ಈ ರೀತಿ ಮಾಡಿದರೆ ಕುಮಾರಸ್ವಾಮಿಗೆ ಬುದ್ಧಿ ಬರುತ್ತದೆ. ತಮ್ಮ ಸಿಎಂ ಪದವಿಯನ್ನು ಉಳಿಸಿಕೊಳ್ಳಲು ಕುಮಾರಸ್ವಾಮಿ ಎಷ್ಟು ನಾಟಕ ಮಾಡುತ್ತಾರೆ ಎಂಬುದು ನನಗೆ ಗೊತ್ತಿದೆ.

ನಮ್ಮ ಶಾಸಕರಿಗೆ ಹೈಕಮಾಂಡ್ ಫೋನ್ ಮಾಡಲ್ಲ. ಆದರೆ ಕೈ ಶಾಸಕರಿಗೆ ಈ ಸಿಎಂ ಫೋನ್ ಮಾಡುತ್ತಾರೆ. ಫೋನ್ ಮಾಡಿ ಅಣ್ಣ ನಿಮಗೇನು ಬೇಕೆಂದು ಕೇಳುತ್ತಾರೆ. ನಿಮಗೇನು ಬೇಕೆಂದು ಕಾಲು ಬೇಕಾದರೂ ಹಿಡೀತಾರೆ. ನಮ್ಮ ಶಾಸಕರು ಒಟ್ಟಾಗಿ ಎಲ್ಲರೂ ರಾಜಿನಾಮೆ ನೀಡಿದರೆ ಕುಮಾರಸ್ವಾಮಿ ಅಲ್ಲ. ಅವರಪ್ಪನೂ ಮಾತು ಕೇಳುತ್ತಾರೆ ಎಂದು ಗುಡುಗಿದರು.

Comments are closed.