ತುಮಕೂರು: ಟಿಕ್ಟಾಕ್ನಲ್ಲಿ ಸ್ಟಂಟ್ ಮಾಡಲು ಹೋಗಿ ಯುವಕ ಜೀವ ಕಳೆದುಕೊಂಡಿದ್ದು, ಟಿಕ್ಟಾಕ್ಗೆ ರಾಜ್ಯದಲ್ಲಿ ಮೊದಲ ಬಲಿ ಇದಾಗಿದೆ.
ಕಳೆದ19ರಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ಟಿಕ್ಟಾಕ್ ಮಾಡಲು ಹೋಗಿದ್ದ ಕುಮಾರ್(22) ಎಂಬ ಯುವಕ ಕತ್ತು, ಬೆನ್ನು ಮೂಳೆ ಮುರಿದುಕೊಂಡಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಕುಮಾರ್, ಚಿಕಿತ್ಸೆ ಫಲಕಾರಿಯಾಗದೇ ಇಂದು ಸಾವನ್ನಪ್ಪಿದ್ದಾನೆ.
ಚಿಕ್ಕನಾಯಕನಹಳ್ಳಿಯ ಗೋಡೆಕೆರೆ ನಿವಾಸಿಯಾಗಿದ್ದ ಕುಮಾರ್, ಆರ್ಕೆಸ್ಟ್ರಾದಲ್ಲಿ ಡ್ಯಾನ್ಸರ್ ಕಮ್ ಸಿಂಗರ್ ಆಗಿದ್ದು, ಸ್ಟಂಟ್ ಮಾಡಲು ಹೋಗಿ ಮೂಳೆ ಮುರಿದುಕೊಂಡಿದ್ದರು.
Comments are closed.