ಬೆಂಗಳೂರು (ಜೂ. 19): ಕಾಂಗ್ರೆಸ್ ಹಿರಿಯ ನಾಯಕರ ವಿರುದ್ಧ ಬಹಿರಂಗವಾಗಿಷಯೇ ಹೇಳಿಕೆ ನೀಡುವ ಮೂಲಕ ಪಕ್ಷವನ್ನು ಮುಜುಗರಕ್ಕೀಡು ಮಾಡುತ್ತಿದ್ದ ಮಾಜಿ ಸಚಿವ ರೋಷನ್ ಬೇಗ್ ಅವರನ್ನು ಪಕ್ಷ ಅಮಾನತು ಮಾಡಿದೆ. ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ದಿನೇಶ್ ಗುಂಡೂರಾವ್ ನೀಡಿದ್ದ ದೂರಿನ ಆಧಾರದ ಮೇರೆಗೆ ಹೈಕಮಾಂಡ್ ಅಮಾನತು ಮಾಡಿದ್ದಾರೆ. ಈಗ ಬೇಗ್ ಅತಂತ್ರ ಸ್ಥಿತಿ ತಲುಪಿದ್ದಾರೆ.
ಬೇಗ್ ಈ ಮೊದಲು ಬಿಜೆಪಿ ಸೇರಲು ಯೋಜನೆ ರೂಪಿಸಿದ್ದರು. ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ, ಬಿಜೆಪಿಗೆ ಜೈ ಎನ್ನುವುದು ಅವರ ಆಲೋಚನೆ ಆಗಿತ್ತು. ಈ ಸಂಬಂಧ ಎಂಜೆ ಅಕ್ಬರ್ ,ಮುಕ್ತಾರ್ ಅಬ್ಬಾಸ್ ನಖ್ವಿ ಮೂಲಕ ಮಾತುಕತೆ ನಡೆಸಿ ಬಿಜೆಪಿ ಹೈಕಮಾಂಡ್ ಒಪ್ಪಿಸುವ ಕೆಲಸವನ್ನು ಬೇಗ್ ಮಾಡಿದ್ದರು. ಆದರೆ ಅವರು ಬಿಜೆಪಿ ಸೇರುವುದಕ್ಕೆ ಆರ್ಎಸ್ಎಸ್ ಅಪಸ್ವರ ಎತ್ತಿತ್ತು ಎನ್ನಲಾಗಿದೆ.
ಶತಾಯ-ಗತಾಯ ಕಮಲ ಪಾಳಯ ಸೇರಲೇಬೇಕು ಎಂದುಕೊಂಡಿದ್ದ ಬೇಗ್ ಬಿಜೆಪಿ ಮತ್ತು ಆರ್.ಎಸ್.ಎಸ್ ನಾಯಕರ ಖುಷಿ ಪಡಿಸಲು ಮುಂದಾಗಿದ್ದರು. ಬಿಜೆಪಿ ಹಾಗೂ ಪಿಎಂ ಮೋದಿ ಹೊಗಳುತ್ತಾ, ಕಾಂಗ್ರೆಸ್ಗೆ ಮಾತಿನ ಚಾಟಿ ಬೀಸಿದ್ದರು. ಇನ್ನೇನು ಬಿಜೆಪಿ ನಡೆಸಲು ತಯಾರಿ ಆಗಿತ್ತು. ಅಷ್ಟರೊಳಗೆ ಬಹುಕೋಟಿ ಐಎಂಎ ವಂಚನೆ ಪ್ರಕರಣದಲ್ಲಿ ಬೇಗ್ ಹೆಸರು ಕೇಳಿಬಂತು. ಹಾಗಾಗಿ ಸ್ವತಃ ಬಿಜೆಪಿ ಬೇಗ್ ಸೇರ್ಪಡೆ ಸಾಧ್ಯವಿಲ್ಲ ಎಂದಿತ್ತು.
ಈ ಘಟನೆ ನಂತರದಲ್ಲಿ ಬೇಗ್ ಸ್ವಲ್ಪ ಮೆತ್ತಗಾಗಿದ್ದರು. ಕೆಸಿ ವೇಣುಗೋಪಾಲ್ ಬಿಜೆಪಿ ತಿರಸ್ಕಾರದ ಮಾಹಿತಿ ಪಡೆದಿದ್ದರು. ಇದೇ ಸರಿಯಾದ ಸಮಯ ಎಂದು ನಿರ್ಧಾರ ಮಾಡಿ ಬೇಗ್ಗೆ ಕೆಸಿವಿ ಸಸ್ಪೆಂಡ್ ಶಿಕ್ಷೆ ಕೊಡಿಸಿದ್ದಾರೆ.
ರಾಜ್ಯ ಕಾಂಗ್ರೆಸ್ ಉಸ್ತುವಾರಿ ಕೆಸಿ ವೇಣುಗೋಪಾಲ್ ಗೆ ಬಫೂನ್, ಸಿದ್ದು ದುರಹಂಕಾರಿ, ದಿನೇಶ್ ಗುಂಡೂರಾವ್ ಯೂಸ್ಲೆಸ್ ಪ್ರೆಸಿಡೆಂಟ್ ಎಂದು ಬೇಗ್ ಹೇಳಿಕೆ ನೀಡಿದ್ದರು. ಲೋಕಸಭಾ ಚುನಾವಣೆ ಸೋಲಿನ ಹಿನ್ನಲೆ ಬಿಜೆಪಿ,ಪಿಎಂ ಮೋದಿ ಹೊಗಳಿ ಕೈ ನಾಯಕರನ್ನು ರೋಷನ್ ಬೇಗ್ ಜರಿದಿದ್ದರು. ಹೇಳಿಕೆ ಸಂಬಂಧ ಹಿರಿಯ ಕೆಪಿಸಿಸಿ ವಿವರಣೆ ಕೇಳಿತ್ತು. ಆದರೆ ಬೇಗ್ ಇದಕ್ಕೆ ಕೇರ್ ಮಾಡಿರಲಿಲ್ಲ.
ಬೇಗ್ ಅತಂತ್ರ:
ಗುಲಾಂ ನಬಿ ಆಜಾದ್, ಅಹಮದ್ ಪಟೇಲ್ ಆಶೀರ್ವಾದ ನನಗಿದೆ. ಹಾಗಾಗಿ ಏನು ಮಾಡಿದರು ದಕ್ಕಿಸಿಕೊಳ್ಳಬಹುದೆಂಬ ವಿಶ್ವಾಸದಲ್ಲಿ ರೋಷನ್ ಬೇಗ್ ಇದ್ದರು. ಆದರೆ, “ರೋಷನ್ ಹೇಳಿಕೆ ಸಾರ್ವಜನಿಕವಾಗಿ ಕಾಂಗ್ರೆಸ್ ಪಕ್ಷವನ್ನೇ ಅವಮಾನ ಮಾಡಿದಂತೆ. ಈ ಪ್ರಕರಣದಲ್ಲಿ ನಾವಿಲ್ಲ. ನಾವೇನು ಮಾಡಲು ಸಾಧ್ಯವಿಲ್ಲ,” ಎಂದು ಹೇಳಿ ಬೇಗ್ ಪರ ನಿಲ್ಲಲ್ಲು ಈ ನಾಯಕರು ಹಿಂದೇಟು ಹಾಕಿದ್ದರು. ಅತ್ತ ಬಿಜೆಪಿ ಕೂಡ ಬಾಗಿಲು ಮುಚ್ಚಿದೆ. ಹಾಗಾಗಿ ಬೇಗ್ ಈಗ ಅಂತತ್ರ ಆಗಿದ್ದಾರೆ.
Comments are closed.