ಕರ್ನಾಟಕ

ಮಹಿಳೆಯರ ಗಲಾಟೆ ಬಿಡಿಸಲು ಹೋಗಿ ಸಾವು ತಂದುಕೊಂಡ ದುರ್ದೈವಿ

Pinterest LinkedIn Tumblr


ರಾಯಚೂರು; ಇಬ್ಬರು ಮಹಿಳೆಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಆರಂಭವಾದ ಜಗಳ ಕೊನೆಗೆ ಪುರುಷನೋರ್ವನ ಕೊಲೆಯಲ್ಲಿ ಅಂತ್ಯವಾದ ಘಟನೆಗೆ ರಾಯಚೂರು ತಾಲೂಕಿನ ಗುಂಜಹಳ್ಳಿ ಸಾಕ್ಷಿಯಾಗಿದೆ.

ಮೃತ ದುರ್ದೈವಿಯನ್ನು 38 ವರ್ಷದ ನರಸಿಂಹಲು ಎಂದು ಗುರುತಿಸಲಾಗಿದೆ.

ಗುಂಜಹಳ್ಳಿ ಗ್ರಾಮದಲ್ಲಿ ನಿನ್ನೆ ಸಂಜೆ ಇಬ್ಬರು ಮಹಿಳೆಯರ ನಡುವೆ ಕ್ಷುಲ್ಲಕ ಕಾರಣಕ್ಕೆ ಜಗಳ ಶುರುವಾಗಿದೆ. ನೋಡನೋಡುತ್ತಿದ್ದಂತೆ ಜಗಳ ವಿಕೋಪಕ್ಕೆ ತಿರುಗಿದೆ. ಪರಿಣಾಮ ಸ್ಥಳದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡಿದೆ. ಈ ವೇಳೆ ನರಸಿಂಹಲು ಜಗಳ ಬಿಡಿಸಲು ಮುಂದಾಗಿದ್ದಾರೆ. ಆದರೆ, ಈ ಗುಂಪಿನ ನಡುವೆ ಅವರ ಮರ್ಮಾಂಗಕ್ಕೆ ಬಲವಾದ ಪೆಟ್ಟು ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಜಗಳ ನಡೆಯುತ್ತಿದ್ದ ಜಾಗದಲ್ಲಿ ದೊಡ್ಡ ಸಂಖ್ಯೆಯಲ್ಲಿ ಗುಂಪುಗೂಡಿದ್ದರಿಂದ ನರಸಿಂಹಲು ಅವರ ಮೇಲೆ ಹಲ್ಲೆ ಮಾಡಿದವರು ಯಾರು ಎಂಬುದು ಗೊತ್ತಾಗುತ್ತಿಲ್ಲ. ಆದರೆ, ಘಟನೆಯನ್ನು ಅವಲೋಕಿಸದರೆ ಕೊಲೆ ಮಾಡುವ ಉದ್ದೇಶದಿಂದಲೇ ಯಾರೋ ಆತನ ಮೇಲೆ ದಾಳಿ ಮಾಡಿರಬೇಕು, ಅದಕ್ಕೆ ಈ ಗುಂಪಿನ ವಾತಾವರಣವನ್ನು ಬಳಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದಾರೆ.

ಪ್ರಸ್ತುತ ಯರಗೇರಾ ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಕೊಲೆ ಸಾಧ್ಯಾ ಸಾಧ್ಯತೆ ಕುರಿತು ವಿಚಾರಣೆ ನಡೆಸುತ್ತಿದ್ದಾರೆ.

Comments are closed.