ಕರ್ನಾಟಕ

ರಮೇಶ್​ ಜಾರಕಿಹೊಳಿ ಭೇಟಿ ಮಾಡಿದ ಪುಣ್ಯಾನಂದ ಶ್ರೀಗಳು!

Pinterest LinkedIn Tumblr


ಬೆಂಗಳೂರು: ನಾವು ರಾಜಕಾರಣದ ಬಗ್ಗೆ ಮಾತನಾಡಿಲ್ಲ, ನಮ್ಮ ಮೀಸಲಾತಿ ವಿಚಾರದ ಬಗ್ಗೆ ಚರ್ಚೆ ನಡೆಸಿದ್ದೇವೆ ಎಂದು ಗೋಕಾಕ್​ ರೆಬೆಲ್​ ಕಾಂಗ್ರೆಸ್​ ಶಾಸಕ ರಮೇಶ್ ಜಾರಕಿಹೊಳಿ ಭೇಟಿ ಬಳಿಕ ಪುಣ್ಯಾನಂದ ಶ್ರೀಗಳು ಹೇಳಿದರು.

ಬೆಂಗಳೂರಿನಲ್ಲಿಂದು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅವರು, ರಾಜ್ಯಾದ್ಯಂತ ಹೋರಾಟ ಹಮ್ಮಿಕೊಂಡಿದ್ದೇವೆ. ಹೀಗಾಗಿ ಅವರನ್ನ ಭೇಟಿ ಮಾಡಿ ಮಾತುಕತೆ ನಡೆಸಿದ್ದೇವೆ ಎಂದು ಅವರು ನುಡಿದರು.

ಅಲ್ಲದೇ ಹಿಂದೆ ವೈಯುಕ್ತಿಕ ಕಾರಣದಿಂದ ಮಧ್ಯ ಪ್ರವೇಶಿಸಿದ್ದೆ. ಆಗ ಇಬ್ಬರು ಸಹೋದರರನ್ನ ಒಟ್ಟು ಮಾಡಿದ್ದೆವು. ಈಗ ರಾಜಕಾರಣದ ವಿಚಾರದಲ್ಲಿ ಮಧ್ಯಪ್ರವೇಶವಿಲ್ಲ. ಅವರ ಜೊತೆ ಅದರ ಬಗ್ಗೆ ಚರ್ಚೆಯನ್ನೂ ಮಾಡಿಲ್ಲ ಎಂದು ಶ್ರೀಗಳು ಮಾತನಾಡಿದರು.

ಇನ್ನು ಮೀಸಲಾತಿ ಹೆಚ್ಚಳಕ್ಕೆ ಸಂಬಂಧಿದಂತೆ ನಾಳೆ ಪ್ರತಿಭಟನೆ ಇಟ್ಟು ಕೊಂಡಿದ್ದೇವೆ. ಅದಕ್ಕೆ ನಮ್ಮ ಸಮುದಾಯದ ಶಾಸಕರನ್ನ ಭೇಟಿ ಮಾಡ್ತಿದ್ದೇವೆ. ಹಾಗಾಗಿ ರಮೇಶ್ ಸಾವ್ಕಾರರನ್ನೂ ಭೇಟಿ ಮಾಡಿದ್ದೇವೆ ಎಂದು ಶಾಸಕ ರಮೇಶ್​ ಜಾರಕಿಹೊಳಿ ಭೇಟಿ ಮಾಡಿದ ನಂತ ಪುಣ್ಯಾನಂದ ಶ್ರೀಗಳು ತಿಳಿಸಿದರು.

Comments are closed.