ಥೇಟ್ ಸಿನಿಮಾ ಸ್ಟೈಲ್ನಲ್ಲಿ ದುಷ್ಕರ್ಮಿಗಳ ಗ್ಯಾಂಗ್ ಗುಟ್ಕಾ ವ್ಯಾಪಾರಿಯ ಮನೆ ಎದುರೇ ಆತನಿಗೆ ಚಾಕುವಿನಿಂದ ಇರಿದು 25 ಲಕ್ಷ ನಗದು ಹಣವನ್ನು ದೋಚಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.
ವಲಿಸಾಬ್ ಅನ್ನೋ ಹೋಲ್ ಸೇಲ್ ವ್ಯಾಪಾರಿ ಹಲ್ಲೆಗೊಳಗಾಗಿದ್ದಾರೆ.. ಗಾಯಾಳು ವಲಿಸಾಬ್ ನಿನ್ನೆ ಮದ್ಯಾಹ್ನ ಹೊಸದುರ್ಗಕ್ಕೆ ತೆರಳಿ ವ್ಯಾಪಾರದ ಹಣ ಸಂಗ್ರಹಿಸಿಕೊಂಡು ರಾತ್ರಿ ಹಿರಿಯೂರಿಗೆ ಬಸ್ನಲ್ಲಿ ಬಂದಿಳಿದಿದ್ರು. ನಂತ್ರ ಆಟೋದಲ್ಲಿ ಹಿರಿಯೂರಿನ ಜಯನಗರದಲ್ಲಿರೊ ಮನೆಯ ಮುಂದೆ ಆಟೋದಿಂದ ಇಳಿಯುವ ವೇಳೆ ಹೆಲ್ಮೇಟ್ ಧರಿಸಿದ್ದ ಮೂವರು ದುಷ್ಕರ್ಮಿಗಳು ಜಸ್ಟ್ ಐದರಿಂದ ಹತ್ತು ಸೆಕೆಂಡುಗಳಲ್ಲಿ ವಲಿಸಾಬ್ ಬಳಿಯಿದ್ದ 25 ಲಕ್ಷದ ಹಣದ ಬ್ಯಾಗ್ ಕಿತ್ತು ಕೊಂಡಿದ್ದಾರೆ.
ವಲಿಸಾಬ್ ಬ್ಯಾಗ್ ಕೊಡಲು ನಿರಾಕರಿಸಿದಾಗ ಓರ್ವ ದುಷ್ಕರ್ಮಿ ರಾಡ್ನಿಂದ ಹೊಡೆದು, ಚಾಕುವಿನಿಂದ ವಲಿಸಾಬ್ಗೆ ಇರಿದು ಹಲ್ಲೆ ನಡೆಸಿ ಎಸ್ಕೇಪ್ ಆಗಿದ್ದಾರೆ. ಈ ಬಗ್ಗೆ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೆರೆಗೆ ಪ್ರಾಥಮಿಕ ತನಿಖೆ ಶುರುಮಾಡಿದ್ದಾರೆ..ಇತ್ತ ಗಾಯಗೊಂಡಿರೊ ವಲಿಸಾಬ್ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶೀಫ್ಟ್ ಮಾಡಿ ಚಿಕಿತ್ಸೆಕೊಡಿಸಲಾಗ್ತಿದೆ.
Comments are closed.