ಕರ್ನಾಟಕ

ಸಿನಿಮಾ ಸ್ಟೈಲ್​ನಲ್ಲಿ ದುಷ್ಕರ್ಮಿಗಳಿಂದ ಗುಟ್ಕಾ ವ್ಯಾಪಾರಿಯ ದರೋಡೆ- ಸಿಸಿಟಿವಿಯಲ್ಲಿ ದೃಶ್ಯ ಸೆರೆ

Pinterest LinkedIn Tumblr


ಥೇಟ್​ ಸಿನಿಮಾ ಸ್ಟೈಲ್​ನಲ್ಲಿ ದುಷ್ಕರ್ಮಿಗಳ ಗ್ಯಾಂಗ್​ ಗುಟ್ಕಾ ವ್ಯಾಪಾರಿಯ ಮನೆ ಎದುರೇ ಆತನಿಗೆ ಚಾಕುವಿನಿಂದ ಇರಿದು 25 ಲಕ್ಷ ನಗದು ಹಣವನ್ನು ದೋಚಿರುವ ಘಟನೆ ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನಲ್ಲಿ ನಡೆದಿದೆ.

ವಲಿಸಾಬ್​ ಅನ್ನೋ ಹೋಲ್​ ಸೇಲ್​ ವ್ಯಾಪಾರಿ ಹಲ್ಲೆಗೊಳಗಾಗಿದ್ದಾರೆ.. ಗಾಯಾಳು ವಲಿಸಾಬ್​ ನಿನ್ನೆ ಮದ್ಯಾಹ್ನ ಹೊಸದುರ್ಗಕ್ಕೆ ತೆರಳಿ ವ್ಯಾಪಾರದ ಹಣ ಸಂಗ್ರಹಿಸಿಕೊಂಡು ರಾತ್ರಿ ಹಿರಿಯೂರಿಗೆ ಬಸ್​ನಲ್ಲಿ ಬಂದಿಳಿದಿದ್ರು. ನಂತ್ರ ಆಟೋದಲ್ಲಿ ಹಿರಿಯೂರಿನ ಜಯನಗರದಲ್ಲಿರೊ ಮನೆಯ ಮುಂದೆ ಆಟೋದಿಂದ ಇಳಿಯುವ ವೇಳೆ ಹೆಲ್ಮೇಟ್ ಧರಿಸಿದ್ದ ಮೂವರು ದುಷ್ಕರ್ಮಿಗಳು ಜಸ್ಟ್​ ಐದರಿಂದ ಹತ್ತು ಸೆಕೆಂಡುಗಳಲ್ಲಿ ವಲಿಸಾಬ್​ ಬಳಿಯಿದ್ದ 25 ಲಕ್ಷದ ಹಣದ ಬ್ಯಾಗ್​ ಕಿತ್ತು ಕೊಂಡಿದ್ದಾರೆ.

ವಲಿಸಾಬ್​ ಬ್ಯಾಗ್ ಕೊಡಲು ನಿರಾಕರಿಸಿದಾಗ ಓರ್ವ ದುಷ್ಕರ್ಮಿ ರಾಡ್​ನಿಂದ ಹೊಡೆದು, ಚಾಕುವಿನಿಂದ ವಲಿಸಾಬ್​ಗೆ ಇರಿದು ಹಲ್ಲೆ ನಡೆಸಿ ಎಸ್ಕೇಪ್​ ಆಗಿದ್ದಾರೆ. ಈ ಬಗ್ಗೆ ಹಿರಿಯೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು, ಸಿಸಿಟಿವಿ ದೃಶ್ಯಾವಳಿ ಆಧಾರದ ಮೆರೆಗೆ ಪ್ರಾಥಮಿಕ ತನಿಖೆ ಶುರುಮಾಡಿದ್ದಾರೆ..ಇತ್ತ ಗಾಯಗೊಂಡಿರೊ ವಲಿಸಾಬ್​ನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಖಾಸಗಿ ಆಸ್ಪತ್ರೆಗೆ ಶೀಫ್ಟ್ ಮಾಡಿ ಚಿಕಿತ್ಸೆಕೊಡಿಸಲಾಗ್ತಿದೆ.

Comments are closed.