ಸ್ಯಾಂಡಲ್ವುಡ್ನಲ್ಲಿ ಖಡಕ್ ಪೊಲೀಸ್ ಆಫೀಸರ್ ಎಸ್ಪಿ ಸಾಂಗ್ಲಿಯಾನ ಸಿನಿಮಾ ಬಿಟ್ರೆ ಮತ್ಯಾವಾ ಸಿನಿಮಾ ತೆರೆಗೆ ಬಂದಿಲ್ಲ. ಆದ್ರೆ ಇದೀಗ ಮತ್ತೊಬ್ಬ ದಿಟ್ಟ, ಪ್ರಾಮಾಣಿಕ ಪೊಲೀಸ್ ಅಧಿಕಾರ ಚಿತ್ರ ಬೆಳ್ಳಿತೆರೆಗೆ ಬತ್ತಿದೆ. ಅದು ಖಾಕಿ ಕಳಚಿಟ್ಟ ಕರ್ನಾಟಕದ ಸಿಂಗಂ ಖ್ಯಾತಿಯ ಐಪಿಎಸ್ ಅಣ್ಣಾಮಲೈ ಸಿನಿಮಾ.
ದಕ್ಷ, ಪ್ರಾಮಾಣಿಕ, ಖಡಕ್ ಪೊಲೀಸ್ ಅಧಿಕಾರಿಗಳ ಲೀಸ್ಟ್ನಲ್ಲಿ ಕರ್ನಾಟಕದ ಸಿಂಗಂ ಖ್ಯಾತಿಯ ಅಣ್ಣಾ ಮಲೈ ಕೂಡ ಒಬ್ರು. ಅಣ್ಣಾಮಲೈ ಅಂದ್ರೆ ಪೋಲೀಸ್ ಆಗೋ ಕನಸು ಕಾಣೋರಿಗೆ ರೋಲ್ ಮಾಡೆಲ್. ಒಬ್ಬ ಪೊಲೀಸ್ ಅಧಿಕಾರಿ ಸಾಮಾನ್ಯನಂತೆ ಜನರೊಂದಿಗೆ ಬೇರೆತು ಪುಂಡರು, ಭ್ರಷ್ಟರ ಪಾಲಿಗೆ ಸಿಂಹ ಸ್ವಪ್ನವಾಗಿದ್ದವರು ಇದೇ ಅಣ್ಣಾಮಲೈ.. ಶಿವಮೊಗ್ಗ ದಕ್ಷಿಣ ಕನ್ನಡ, ಚಿಕ್ಕಮಗಳೂರು, ಉಡುಪಿ ಬೆಂಗಳೂರಿನಲ್ಲಿ ಸೇರಿ ಒಂಬತ್ತು ವರ್ಷಗಳ ಸೇವೆ ಸಲ್ಲಿದ ಸಿಂಗಂ ಕೆಲಸಗಳಿಗೆ ಜನ್ರು ಶಾಬಾಷ್ ಗಿರಿ ಕೊಟ್ಟರು.
ಖಡಕ್ ಖಾಕಿ ಆಫೀಸರ್ ಅಣ್ಣಾಮಲೈ ಈಗ ವೈಯಕ್ತಿಕ ಕಾರಣ ಕೊಟ್ಟು ಖಾಕಿ ಕಳಚಿದ್ದಾರೆ. ಆದ್ರೆ ಅಣ್ಣಾಮಲೈರನ್ನ ಜನ ಎಂದೂ ಮರೆಯೋಕೆ ಆಗಲ್ಲಾ. ಹೀಗಾಗಿ ಈಗ ಅಣ್ಣಾಮಲೈ ಜೀವನಾಧಾರಿತ ಚಿತ್ರ ಬರ್ತಿದೆ. ಚಿಕ್ಕಮಗಳೂರಿನ ಪೊಲೀಸ್ ಅಧಿಕಾರಿ ಉಮಾಶಂಕರ್ ಅನ್ನೋರು ಅಣ್ಣಾಮಲೈ ಬಗ್ಗೆ ಹಾಡುಗಳನ್ನ ಬರೆದಿದ್ದಾರೆ. ಈ ಹಾಡುಗಳು ಸದ್ಯ ಯುಟ್ಯೂಬ್ನಲ್ಲಿ ಭಾರೀ ಸದ್ದು ಮಾಡ್ತಿದೆ. ಉಮಾಶಂಕರ್ ಅವರು ಅಣ್ಣಾ ಐಪಿಎಸ್ ಅನ್ನೋ ಟೈಟಲ್ನಡಿ ಸಿನಿಮಾ ಮಾಡಲು ರೆಡಿಯಾಗಿದ್ದಾರೆ.
ಇಷ್ಟೇ ಅಲ್ಲ ಅಣ್ಣಾಮಲೈ ಉಡುಪಿ ಜಿಲ್ಲೆಯಲ್ಲಿ ಕೆಲಸ ಮಾಡುವಾಗ ಡ್ರಗ್ಸ್ ಮಾಫಿಯಾವನ್ನ ಮಟ್ಟ ಹಾಕಿದ ಸಿಂಗಂ. ಹದಿಹರೆಯದ ಮಕ್ಕಳೀಗೆ ಸಿಕ್ತಿದ್ದ ಡ್ರಗ್ಸ್ಅನ್ನ ತಡೆಗಟ್ಟಿದ ದಿಟ್ಟ ಖಡಕ್ ಅಧಿಕಾರಿ. ಅಷ್ಟೆ ಅಲ್ಲ ಅಣ್ಣಾ ಮಲೈ ಕೆಲಸ ಮಾಡಿದ ಕಡೆಯಲ್ಲಾ ಅಣ್ಣಾಮಲೈ ಮಾಡಿದ ಕೆಲಸಗಳನ್ನ ಜನ ಕೊಂಡಾಡ್ತಾರೆ.
ಅಣ್ಣಾ ಮಲೈ ತಮಿಳುನಾಡಿನವರಾದ್ರು, ಕರ್ನಾಟಕದಲ್ಲಿ ಖಡಕ್ ಆಫೀಸ್ಅಂತ ಹೆಸ್ರು ಮಾಡಿದವ್ರು. ಈ ಪೊಲೀಸ್ ಅಧಿಕಾರಿಗೆ ಸಿನಿಮಾ ನಟರಿಗಿರೋ ಹಾಗೆ ದೊಡ್ಡ ಅಭಿಮಾನಿ ಬಳಗ ಕೂಡ ಇದೆ. ಹೀಗಾಗಿ ಪ್ರತಿಯೊಬ್ಬ ಯೂತ್ಸ್ಗೆ ಐಪಿಎಸ್ ಅಣ್ಣಾಮಲೈ ಐಕಾನ್. ಒಂದು ವೇಳೆ ಈ ಯೂತ್ ಐಕಾನ್ ಅಣ್ಣಾಮಲೈ ಸಿನಿಮಾ ಬಂದ್ರೆ ಯಾರು ನಿರ್ದೇಶನ ಮಾಡ್ತಾರೆ. ಯಾರು ಖಾಕಿ ತೊಟ್ಟು ಸಿಂಗಂ ರೀತಿ ಘರ್ಜಿಸ್ತಿರೇ ಅನ್ನೋದು ಇಂಟ್ರೆಸ್ಟಿಂಗ್ ವಿಷಯ.
Comments are closed.