ಕರ್ನಾಟಕ

ಫಲಿತಾಂಶಕ್ಕೂ ಮುನ್ನ ನಿಖಿಲ್​ ಆಮಂತ್ರಣ ಪತ್ರಿಕೆಯಲ್ಲಿ ಮಂಡ್ಯ ಸಂಸದ!

Pinterest LinkedIn Tumblr


ಮಂಡ್ಯ: ಲೋಕಸಭಾ ಚುನಾವಣೆ ನಡೆದು ಅದರ ಫಲಿತಾಂಶ ಕೂಡ ನಾಳೆ ಕ್ಷಣಗಣೆ ಶುರುವಾಗಿದೆ. ಆದರೆ ಮಂಡ್ಯದಲ್ಲೊಬ್ಬ ನಿಖಿಲ್​ ಕುಮಾರಸ್ವಾಮಿ ಅಭಿಮಾನಿ ಫಲಿತಾಂಶಕ್ಕೂ ಮುನ್ನವೇ ಸ್ವತಃ ತಾನೇ ಮಂಡ್ಯ ಸಂಸದರಾಗಿ ನಿಖಿಲ್ ಕುಮಾರಸ್ವಾಮಿ ಎಂದು ಘೋಷಣೆ ಮಾಡಿಬಿಟ್ಟಿದ್ದಾರೆ.

ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು ಸಂಸದರು ಎಂದು ಹೆಸರು ಬರೆಸುವ ಮೂಲಕ ಘೋಷಣೆ ಮಾಡಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಮದುವೆಯ ಆಮಂತ್ರಣ ಪತ್ರಿಕೆ ಸಖತ್​ ವೈರಲ್ ಆಗಿದೆ.

ಅಲ್ಲದೇ ಸಂಸದರು ಎಂದು ಬರೆಸಿ ನಿಖಿಲ್​ ಕುಮಾರಸ್ವಾಮಿ ಮದುವೆಗೆ ವಿಶೇಷ ಆಹ್ವಾನಿತರು, ಸಂಸದರು, ಮಂಡ್ಯ ಜಿಲ್ಲೆ ಎಂದು ಅಭಿಮಾನಿ ಹೆಸರು ಮತ್ತು ಫೋಟೋ ಹಾಕಿಸಿದ್ದಾರೆ. ದಿನಾಂಕ ೯-೦೬-೨೦೧೯ ರಂದು ಶ್ರೀರಂಗಪಟ್ಟಣದಲ್ಲಿ ನಡೆಯಲಿರುವ ಮದುವೆ ಸಮಾರಂಭಕ್ಕೆ ಈ ರೀತಿ ಬರೆಸಿ ತಮ್ಮ ಸಂಬಂಧಿಕರು, ಸ್ನೇಹಿತರಿಗೆ ಆಹ್ವಾನ ಪತ್ರಿಕೆಯನ್ನು ಹಂಚಿದ್ದಾರೆ.

ಈ ಹಿಂದೆ ಕೆಲವು ನಿಖಿಲ್​ ಕುಮಾರಸ್ವಾಮಿ ಅಭಿಮಾನಿಗಳು ಮಂಡ್ಯ ಜಿಲ್ಲೆ ಸಂಸದರು ನಿಖಿಲ್​ ಕುಮಾರಸ್ವಾಮಿ ಎಂದು ಬೋರ್ಡ್​ ಬರೆಸಿಕೊಂಡಿದ್ದು ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಮೇ 23ರಂದು ಲೋಕಸಭಾ ಚುನಾವಣೆಯ ಫಲಿತಾಂಶ ಹೊರಬೀಳಲಿದ್ದು ಮಂಡ್ಯ ಕ್ಷೇತ್ರದಲ್ಲಿ ಕಾಂಗ್ರೆಸ್​-ಜೆಡಿಎಸ್​ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್​ ಕುಮಾರಸ್ವಾಮಿ ಸ್ಪರ್ಧೆ ಮಾಡಿದ್ದಾರೆ. ಇವರ ವಿರುದ್ಧ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ಸ್ಪರ್ಧಿಸಿದ್ದಾರೆ.

ಎಕ್ಸಿಟ್​ ಪೋಲ್​ನಲ್ಲಿ ಹೊರ ಬಂದ ಫಲಿತಾಂಶದ ಪ್ರಕಾರ ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಗೆಲುವು ಸಾಧಿಸಲಿದ್ದಾರೆ ಎಂದು ಹೇಳಿವೆ.

Comments are closed.