ಕರ್ನಾಟಕ

ದಾವಣಗೆರೆ; ಕೊಲೆಯಾದ ತನ್ನದೇ ಮೃತದೇಹದ ಫೋಟೋವನ್ನು ಪೋಷಕರಿಗೆ ಕಳುಹಿಸಿದ ಯುವಕ ! ಹೀಗೆ ಮಾಡಿದ್ದೇಕೆ ಗೊತ್ತೇ…?

Pinterest LinkedIn Tumblr

ದಾವಣಗೆರೆ: ಯುವಕನೋರ್ವ ತನ್ನದೇ ಮೃತದೇಹದ ಫೋಟೊಗಳನ್ನು ತಾನೆ ಕಳಿಸಿ ಆತಕ ಪೋಷಕರು, ಸ್ನೇಹಿತರು ಕಂಗಾಲಾಗುವಂತೆ ಮಾಡಿದ್ದ ಘಟನೆ ದಾವಣಗೆರೆ ನಗರದಲ್ಲಿ ನಡೆದಿದೆ.

ಘಟನೆಯ ವಿವರ ತಿಳಿಯುತ್ತಿದ್ದಂತೆಯೇ ಆ ಯುವಕನ ಉದ್ದೇಶ ಬಹಿರಂಗವಾಗುತ್ತಿದ್ದಂತೆಯೇ ಪೊಲೀಸರು ಆತನನ್ನು ಬಂಧಿಸಿದ್ದಾರೆ. ದಾವಣಗೆರೆಯ ಯೆಲ್ಲಮ್ಮ ನಗರದ ನಿವಾಸಿ 23 ವರ್ಷದ ಪರಶುರಾಮ್ ಬಂಧಿತ ವ್ಯಕ್ತಿಯಾಗಿದ್ದು, ಪೋಷಕರು ಹಾಗೂ ಸ್ನೇಹಿತರಿಗೆ ಆತಂಕ ಉಂಟುಮಾಡುವುದಕ್ಕಾಗಿಯೇ ಈ ರೀತಿ ಮಾಡಿದ್ದಾನೆಂದು ತಿಳಿದುಬಂದಿದೆ.

ದಾವಣಗೆರೆಯಲ್ಲಿ ಕಳೆದ ಕೆಲವು ದಿನಗಳಿಂದ ಸರಣಿ ಕೊಲೆಗಳು ನಡೆಯುತ್ತಿದ್ದು, ರಕ್ತದ ಮಡುವಿನಲ್ಲಿ ಬಿದ್ದಿದ್ದ ಯುವಕನ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದದ್ದನ್ನು ಕಂಡ ಜನತೆ ಆತಂಕಕ್ಕೊಳಗಾಗಿದ್ದರು. ಪೊಲೀಸರು ವಿಚಾರಣೆಗೊಳಪಡಿಸಿದ ನಂತರ ಪರಶುರಾಮ್ ಎಂಬ ಯುವಕ ಸ್ಮಾರ್ಟ್ ಫೋನ್ ಗಾಗಿ ಹೀಗೆ ಮಾಡಿದ್ದಾನೆಂದು ತಿಳಿದುಬಂದಿದೆ.

ಪರಶುರಾಮ್ ಹಾಗೂ ಸ್ನೇಹಿತರಿಗೆ ಆಕಸ್ಮಿಕವಾಗಿ ಸ್ಮಾರ್ಟ್ ಫೋನ್ ಸಿಕ್ಕಿದೆ, ಅದನ್ನು ಸ್ನೇಹಿತರಿಗೆ ಕೊಡುವುದಕ್ಕೆ ಇಷ್ಟ ಇಲ್ಲದೇ, ತಾನೆ ಇಟ್ಟುಕೊಳ್ಳಲು, ಸ್ನೇಹಿತರು ಹಾಗೂ ಕುಟುಂಬ ಸದಸ್ಯರನ್ನು ಭಯಪಡಿಸುವ ಉದ್ದೇಶದಿಂದ, ಟೊಮ್ಯಾಟೋ ಕೆಚ್ ಅಪ್, ಕುಂಕುಮದ ನೀರನ್ನು ತನ್ನ ಮೇಲೆ ಹಾಕಿಕೊಂಡು ಈ ರೀತಿ ತನ್ನದೇ ಮೃತದೇಹದ ಫೋಟೋವನ್ನು ವೈರಲ್ ಮಾಡಿದ್ದಾನೆಂದು ತಿಳಿದುಬಂದಿದೆ.

Comments are closed.