ಕರ್ನಾಟಕ

ಲಿಂಗಾಯತರು ಕಾಂಗ್ರೆಸ್​​ಗೆ ವೋಟ್ ನೀಡಿದರೆ ಅಪರಾಧ ಮಾಡಿದಂತೆ: ಯಡಿಯೂರಪ್ಪ

Pinterest LinkedIn Tumblr


ಕಲಬುರಗಿ: ಕುಂದಗೋಳ ಮತ್ತು ಚಿಂಚೋಳಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್​​-ಬಿಜೆಪಿ ನಾಯಕರ ಮತಬೇಟೆ ಶುರು ಮಾಡಿದ್ದು ಮಾತದಾನಕ್ಕೆ ಕೇವಲ ನಾಲ್ಕು ದಿನಗಳು ಮಾತ್ರ ಬಾಕಿ ಇದೆ.

ಕಲಬುರ್ಗಿಯ ಕಾಳಗಿಯಲ್ಲಿ ಮಾಧ್ಯಮ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರು, ಲಿಂಗಾಯತರು ಕಾಂಗ್ರೆಸ್​​​ಗೆ ವೋಟು ಹಾಕಿದರೆ ಅಪರಾಧ ಮಾಡಿದಂತೆ ಎಂದು ವೀರಶೈವ ಲಿಂಗಾಯತರಿಗೆ ಕರೆ ಕೊಟ್ಟಿದ್ದಾರೆ.

ಇನ್ನು ಬಿಎಸ್ ಯೂಡಿಯೂರಪ್ಪ ಹೇಳಿಕೆಗೆ ಠಕ್ಕರ್ ಕೊಡಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದ್ದು ಚಿಂಚೋಳಿಯಲ್ಲಿಂದು ಕಾಂಗ್ರೆಸ್ ವೀರಶೈವ ಲಿಂಗಾಯತ ಸಭೆ ನಡೆಸಲಾಗಿದೆ. ಈ ಸಭೆಯಲ್ಲಿ ಡಿಸಿಎಂ ಡಾ ಜಿ. ಪರಮೇಶ್ವರ್, ಗೃಹಸಚಿವ ಎಂ.ಬಿ ಪಾಟೀಲ್, ಈಶ್ವರ್ ಖಂಡ್ರೆ ಭಾಗಿಯಾಗಿದ್ದಾರೆ.

ಸದ್ಯ ಮೇ 19ಕ್ಕೆ ಉಪಚುನಾವಣೆ ನಡೆಯಲಿದ್ದು ಎರಡು ಪಕ್ಷದವರು ಪ್ರಚಾರಕ್ಕೆ ಮತ್ತಷ್ಟು ವೇಗ ನೀಡಲಿದ್ದಾರೆ. ಚಿಂಚೋಳಿ ಕ್ಷೇತ್ರದಲ್ಲಿ ಡಾ. ಉಮೇಶ್ ಜಾಧವ್​ ಕಾಂಗ್ರೆಸ್​ ಶಾಸಕಾಂಗ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿ ಬಿಜೆಪಿ ಸೇರಿರುವುದರಿಂದ ಆ ಕ್ಷೇತ್ರಕ್ಕೆ ಚುನಾವಣೆ ನಡೆಯಲಿದೆ.

ಕುಂದಗೋಳ ಕ್ಷೇತ್ರದ ಶಾಸಕರಾಗಿದ್ದ ಸಿಎಸ್​ ಶಿವಳ್ಳಿ ಅವರ ಅಕಾಲಿಕ ಮರಣದ ಹಿನ್ನೆಲೆ ಆ ಕ್ಷೇತ್ರಕ್ಕೆ ಉಪಚುನಾವಣಾ ನಡೆಯಲಿದೆ.

Comments are closed.